Sunday, June 8, 2025

ಸತ್ಯ | ನ್ಯಾಯ |ಧರ್ಮ

ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತ ಸರ್ಕಾರ; ಇನ್ಮುಂದೆ ಯಾವುದೇ ಸಮಾರಂಭಕ್ಕೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿತದ ದುರ್ಘಟನೆಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಬೃಹತ್‌ ಸಭೆ, ಸಮಾರಂಭ, ವಿಜಯೋತ್ಸವ ಕಾರ್ಯಕ್ರಮಗಳಿಗೆಂದೇ ಬಿಗಿಯಾದ ಮಾರ್ಗಸೂಚಿ (ಎಸ್‌ಒಪಿ/ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌) ಹೊರಡಿಸಲು ನಿರ್ಧರಿಸಿದೆ. ಯಾವುದೇ ಅಹಿತಕರ ದುರ್ಘಟನೆ ನಡೆದರೆ ಅದರ ಆಯೋಜಕರೇ ಇದಕ್ಕೆ ನೇರ ಹೊಣೆ ಆಗಬೇಕು ಎಂಬುದು ಈ ಮಾರ್ಗಸೂಚಿಯಲ್ಲಿ ಅಡಕವಾಗಿದೆ.

ಈಗಾಗಲೇ ಇರುವ ನಿಯಮಾವಳಿಗಳ ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಹೊಸ ಪರಿಷ್ಕೃತ ಎಸ್‌ಒಪಿ ಪಾಲನೆಗೆ ಸಂಬಂಧಿಸಿದ ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಮುಚ್ಚಳಿಕೆ ಬರೆದುಕೊಟ್ಟ ಬಳಿಕವೇ ಸಭೆಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ SOP ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಿ ಸಭೆ ಸಮಾರಂಭ ಮತ್ತು ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಅನ್ವಯವಾಗಲಿದೆ. ಜತೆಗೆ ಸಾರ್ವಜನಿಕ ಸಮಾರಂಭಗಳಲ್ಲಿಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್ ”ರಾಜ್ಯದಲ್ಲಿ ಇನ್ನು ಮುಂದೆ ಬೃಹತ್‌ ಸಭೆ, ಸಮಾರಂಭ, ವಿಜಯೋತ್ಸವಗಳ ವೇಳೆ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಹೊಸ ಎಸ್‌ಒಪಿ ಮಾಡಲಾಗುವುದು,” ಎಂದು ಹೇಳಿದರು.

”ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಘಟನೆ ಮರುಕಳಿಸಬಾರದು. ಇಂತಹ ವಿಜಯೋತ್ಸವ, ಸಭೆ, ಸಮಾರಂಭಗಳನ್ನು ಪೊಲೀಸ್‌ ಇಲಾಖೆ ನೀಡುವ ನಿರ್ದೇಶನದ ಚೌಕಟ್ಟಿನಲ್ಲೇ ಮಾಡಬೇಕು. ಅದಕ್ಕೆ ಬೇಕಾದ ಹೊಸ ಎಸ್‌ಒಪಿಯನ್ನು ಗೃಹ ಇಲಾಖೆಯಿಂದ ಹೊರಡಿಸಲಾಗುವುದು,” ಎಂದು ತಿಳಿಸಿದರು.

‘ಬುಧವಾರ ನಡೆದಿರುವ ಘಟನೆ ದುರದೃಷ್ಟಕರ. ರಾಜ್ಯದ ಕ್ರಿಕೆಟ್‌ ಇತಿಹಾಸದಲ್ಲಿಆಗಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಮತ್ತೆ ಎಂದೂ ಈ ರೀತಿ ಅಮಾಯಕರ ಸಾವುಗಳು ಸಂಭವಿಸಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. 20-25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದಾಗ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಊಹೆ ಮಾಡಿರಲಿಲ್ಲ. ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ನಂತರ ಸೂಕ್ತ ಕ್ರಮವಾಗಲಿದೆ,” ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page