Saturday, June 21, 2025

ಸತ್ಯ | ನ್ಯಾಯ |ಧರ್ಮ

ರಾಜ್ಯಪಾಲರ ಟೀ ಪಾರ್ಟಿಯನ್ನು ಬಹಿಷ್ಕರಿಸಿದ ಸರ್ಕಾರ

ರಾಜ್ಯಪಾಲ ಆರ್.ಎನ್.ರವಿ ಅವರ ನೀಟ್ ಪರ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸ್ವಾತಂತ್ರ್ಯ ದಿನದಂದು ಅವರು ಆಯೋಜಿಸಿರುವ ಟೀ ಪಾರ್ಟಿಯನ್ನು ತಮ್ಮ ಸರ್ಕಾರ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ, ರಾಜ್ಯಪಾಲರು ರಾಜ್ಯಕ್ಕೆ ರಾಷ್ಟ್ರೀಯ ಪರೀಕ್ಷೆಯಿಂದ ವಿನಾಯಿತಿ ನೀಡುವ ತಮಿಳುನಾಡು ವಿಧಾನಸಭೆ ಮಸೂದೆಗೆ ಎಂದಿಗೂ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ಈ ಆದೇಶದಲ್ಲಿ ರಾಜ್ಯಪಾಲರು ನೀಡಿರುವ ಹೇಳಿಕೆ ವಿದ್ಯಾರ್ಥಿಗಳು, ಯುವಕರನ್ನು ಬೆಚ್ಚಿ ಬೀಳಿಸಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ‘ರಾಜ್ಯಪಾಲರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಇದರಿಂದ ತಮಿಳುನಾಡಿನ ಏಳು ವರ್ಷಗಳ ಸುದೀರ್ಘ ನೀಟ್ ವಿರೋಧಿ ಹೋರಾಟವನ್ನು ಅವಮಾನಿಸಿದಂತಾಗಿದೆ,” ಎಂದು ಸಿಎಂ ಹೇಳಿದರು.

ರವಿ ಅವರು ಉನ್ನತ ಶಿಕ್ಷಣ ಇಲಾಖೆಯನ್ನೂ ಗಲೀಜು ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಕನಸುಗಳನ್ನು ನಾಶಪಡಿಸುವಂತಿದೆ ಎಂದು ಸಿಎಂ ಹೇಳಿದರು. ನೀಟ್ ಪರ ನಿಲುವಿಗೆ ರಾಜ್ಯ ಸರ್ಕಾರದ ವಿರೋಧವನ್ನು ನೆನಪಿಸಲು ಸ್ಟಾಲಿನ್, ‘ಆಗಸ್ಟ್ 15 ರಂದು ರಾಜಭವನದಲ್ಲಿ ಆಯೋಜಿಸಿರುವ ಚಹಾಕೂಟವನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ’ ಎಂದು ವಿವರಿಸಿದರು.

ಕಳೆದ ವಾರವಷ್ಟೇ ಕ್ರೋಂಪೇಟೆಯ ಜಗದೀಶ್ವರನ್ ಎಂಬ ವ್ಯಕ್ತಿ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವನ್ನು ಸಹಿಸಲಾಗದೆ ತಂದೆ ಸೆಲ್ವಶೇಖರ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಜೋಡಿ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಎಂ.ಕೆ.ಸ್ಟಾಲಿನ್, ವೈದ್ಯನಾಗುವ ಕನಸು ಕಂಡಿದ್ದ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಈಗ ನೀಟ್ ಆತ್ಮಹತ್ಯೆ ಪಟ್ಟಿಗೆ ಸೇರುತ್ತಿರುವುದು ದುರಂತದ ಸಂಗತಿ. ಯಾವುದೇ ಸಂದರ್ಭದಲ್ಲೂ ಯಾರೂ ಪ್ರಾಣ ಕಳೆದುಕೊಳ್ಳಬಾರದು, ನೀಟ್ ಎನ್ನುವ ಪಿಡುಗನ್ನು ನಾವು ತೊಲಗಿಸಬಹುದು ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page