Friday, June 20, 2025

ಸತ್ಯ | ನ್ಯಾಯ |ಧರ್ಮ

‌ಮೈಸೂರು ದಸರಾ: BJP ವಿರುದ್ಧ ಮತ್ತೆ ಮುನಿದ ಎಚ್ ವಿಶ್ವನಾಥ್

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮೈಸೂರಿನ ಉಸ್ತುವಾರಿಯನ್ನು ಮೈಸೂರಿನ ಹೊರಗಿನವರಿಗೆ ನೀಡಲಾಗುತ್ತಿದೆ ಎಂದು ಬಿಜೆಪಿ ನಾಯಕ ಎಚ್ ವಿಶ್ವನಾಥ್‌ ಅವರು ಇಂದು ಮೈಸೂರಿನಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

ಇಂದು ನಗರದಲ್ಲಿ ಪತ್ರಿಕಾ ಪ್ರತಿನಿಧಿಗಳ ಜೊತೆ ಈ ಕುರಿತು ಮಾತನಾಡಿದ ಅವರು ಈ ಬಾರಿಯ ದಸರಾದಲ್ಲಿ ದುಂದುವೆಚ್ಚ ಮಾಡಲಾಗಿದೆ ಹೀಗಾಗಿ ದಸರಾ ಖರ್ಚು-ವೆಚ್ಚಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಮುಂದುವರೆದು ಮಾತನಾಡಿದ ಅವರು, ಈ ಬಾರಿ ದಸರಾ ಆಚರಣೆಯ ಸಂಬಂಧ ಎಸ್‌ ಟಿ ಸೋಮಶೇಖರ್‌ ದಸರಾ ನಡೆಸಿದ್ದಾರೆಂದು ಆರೋಪಿಸಿದರು.

ಅತ್ತ ಯತ್ನಾಳ್‌, ಇತ್ತ ವಿಶ್ವನಾಥ್‌ ಹೀಗೆ ದಿನಕ್ಕೊಬ್ಬರಂತೆ ಪಕ್ಷದವರೇ ಬಿಜೆಪಿಯ ಕಾರ್ಯವೈಖರಿಯ ಕುರಿತು ಕಟುವಾದ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚುನಾವಣೆಯು ಸನಿಹದಲ್ಲೇ ಇರುವುದರಿಂದಾಗಿ ಪಕ್ಷಕ್ಕೆ ಇಂತಹ ಹೇಳಿಕೆಗಳು ಹೆಚ್ಚು ಹೆಚ್ಚು ಇರಿಸು-ಮುರಿಸು ತರಿಸುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page