Thursday, May 15, 2025

ಸತ್ಯ | ನ್ಯಾಯ |ಧರ್ಮ

ಕಾಮ್ರೇಡ್ ವಿಕ್ರಂ ರಾವ್ ನಿಧನಕ್ಕೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

ಹಾಸನ : ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಸುಧೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಹಾಗೂ ಕ್ರಿಯಾಶೀಲ ಸಂಘಟಕರಾದ ಕೆ.ವಿ. ವಿಕ್ರಮರಾವ್ ಅವರಿಗೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರದಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಒಂದು ನಿಮಿಷ ಮೌನ ಆಚರಿಸುವುದರ ಮೂಲಕ ಅರ್ಥಪೂರ್ಣವಾಗಿ ಶ್ರದ್ಶಾಂಜಲಿ ಅರ್ಪಿಸಿದರು. ಇದೆ ವೇಳೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹೆಚ್.ಪಿ. ಮದನ್ ಗೌಡ ಮಾತನಾಡಿ, ಪತ್ರಕರ್ತರ ಸಂಘಟಕರಾದ ಕೆ.ವಿ. ವಿಕ್ರಮರಾವ್ ಅವರ ನಿಧನ ಪತ್ರಕರ್ತರ ರಂಗಕ್ಕೆ ಬಾರಿ ನಷ್ಟವಾಗಿದೆ. ಪಕ್ಕದ ದೇಶಗಳಲ್ಲಿ ಕೂಡ ಭಾಂದವ್ಯ ಹೊಂದಿದ್ದರು. ಕೇಂದ್ರ ಸರಕಾರ ಇವರ ಮಾತಿಗೆ ಮಾನ್ಯತೆ ಕೊಡುತಿತ್ತು. ನನಗೆ ವಿಕ್ರಮ್ ಜೊತೆ ಹೆಚ್ಚಿನ ಒಡನಾಟವಿತ್ತು. ಇಡೀ ದೇಶಾಧ್ಯಂತ ವಿವಿಧ ಜಾಗಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದರು. ಇಡೀ ದೇಶದ ಪತ್ರಕರ್ತರನ್ನು ಒಂದು ಕುಟುಂಬ ಎಂದುಕೊAಡಿದ್ದರು. ವಿಕ್ರಮ್ ಅವರ ಅವಧಿಯಲ್ಲಿ ಬೆಳಗೊಳದಲ್ಲಿ ಎರಡು ಸಮ್ಮೇಳನ ಆಗಿದೆ. ಪತ್ರಕರ್ತರಿಗಾಗಿಯೇ ಜೀವನವನ್ನು ಮುಡಿಪಿಗಾಗೊಟ್ಟದ್ದವರು ಎಂದು ಇದೆ ವೇಳೆ ನೆನಪಿಸಿಕೊಂಡರು. ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಮೃತರ ಆತ್ಮಕ್ಕೆ ಶಾಂತಿ ಸಿಗಲೆ ಎಂದು ಹೇಳಿದರು.


ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ ಮಾತನಾಡಿ, ವಿಕ್ರಮ್ ಅವರು ಧೀಮಂತ ವ್ಯಕ್ತಿತ್ವ ಹೊಂದಿದ್ದರು. ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಹೆಚ್ಚು ಗೌರವ ಕೊಡುತ್ತಿದ್ದರು. ನಾಯಕತ್ವದ ಗುಣ ಹೊಂದಿದ್ದ ಅವರು ಎಲ್ಲಾರನ್ನು ಗೌರವಿಸುತ್ತಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿ ಯವರಿಗೆ ಸಂಘಟಿಸಿದ್ದರು. ಪತ್ರಕರ್ತರ ಶ್ರೇಯಾಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್ ಮಾತನಾಡಿ, ವಿಕ್ರಂ ಅವರ ಬರಹದಲ್ಲಿ ಭಾಷೆ ಮೇಲೆ ಹಿಡಿತ ಹೊಂದಿದ್ದರು. ಇತ್ತಿಚಿನ ಕೆಲ ಘಟನೆ ಅವರಿಗೆ ಆತಂಕ ಉಂಟು ಮಾಡಿತ್ತು. ಎಲ್ಲಾರಿಗೂ ಗೌರವ ಕೊಡುತ್ತಿದ್ದರು. ಶ್ವಾಸ ಕೋಶ ಸಮಸ್ಯೆ ಆಗಿ ಕೊನೆ ಉಸಿರು ಎಳೆದಿದ್ದಾರೆ. ಅವರ ಈ ಸಾವು ಬೇಸರ ತಂದಿದೆ ಎಂದು ಹೇಳಿದರು.


ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಮಂಜುನಾಥ್ ಮಾತನಾಡಿ, ಅವರು ಒಬ್ಬ ಪತ್ರಕರ್ತರಲ್ಲ. ರಾಷ್ಟಿಯ ನಾಯಕರು. ಹಾಸನ ಜಿಲ್ಲೆಗೆ ನಿಕಟ ಸಂಪರ್ಕ ಹೊಂದಿದ್ದರು. ಉತ್ತಮ ವಾಗ್ಮಿಗಳು. ಅವರ ಗಟ್ಟಿ ಸಂಘಟನೆ ಇಂದು ಕೂಡ ಪತ್ರಿಕಾ ರಂಗ ಗಟ್ಟಿಯಾಗಿ ಉಳಿದಿದೆ ಎಂದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಇಂದು ಅವರ ದೇಹ ನಮ್ಮ ಮುಂದೆ ಇಲ್ಲದಿದ್ದರೂ ಅವರು ಮಾಡಿದ ಕೆಲಸ ಜೀವಂತವಾಗಿದೆ. ವಿಕ್ರಂ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದರು. 16 ರಾಜ್ಯಗಳಲ್ಲಿ ಹಿಡಿತ ಹೊಂದಿದ್ದರು. ಪತ್ರಕರ್ತರ ಬಹುತೇಕ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರು. ಸಂಘಟನೆಗೆ ದೊಡ್ಡ ಶಕ್ತಿ ಆಗಿದ್ದರು ಎಂದು ಹಳೆಯ ನೆನಪನ್ನು ಇದೆ ವೇಳೆ ಮೆಲುಕು ಹಾಕಿದರು.
ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page