Sunday, November 17, 2024

ಸತ್ಯ | ನ್ಯಾಯ |ಧರ್ಮ

ಜಾಣ, ತುತ್ತಾ ಮುತ್ತಾ ಚಿತ್ರಗಳ ನಾಯಕ ನಟಿ ಕಸ್ತೂರಿ ಬಂಧನ

ನವ ತೆಲಂಗಾಣ – ಹೈದರಾಬಾದ್: ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರನ್ನು ಟೀಕಿಸಿದ್ದ ನಟಿ ಕಸ್ತೂರಿ ಅವರನ್ನು ಚೆನ್ನೈ ಪೊಲೀಸರು ಇಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.

300 ವರ್ಷಗಳ ಹಿಂದೆ ತಮಿಳುನಾಡು ರಾಜರ ಆಶ್ರಮದಲ್ಲಿ ಮಹಿಳೆಯರ ಸೇವೆ ಮಾಡಲು ಬಂದ ತೆಲುಗು ಜನರು ಈಗ ತಮಿಳು ಜನಾಂಗ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಎಂದು ಬ್ರಾಹ್ಮಣರ ಸಮ್ಮೇಳನವೊಂದರಲ್ಲಿ ಕಸ್ತೂರಿ ಅನುಚಿತ ಟೀಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಸ್ತೂರಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕಸ್ತೂರಿಯವರು ಕ್ಷಮೆಯಾಚಿಸಿದರೂ ತಮಿಳುನಾಡಿನಲ್ಲಿ ನೆಲೆಯೂರಿರುವ ತೆಲುಗರ ಕೋಪದ ಜ್ವಾಲೆಯು ತಣಿಯಲಿಲ್ಲ. ಇದೇ ವೇಳೆ ಮದ್ರಾಸ್ ಹೈಕೋರ್ಟ್ ಕಸ್ತೂರಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಕಸ್ತೂರಿಯನ್ನು ಚೆನ್ನೈ ಎಗ್ಮೋರ್ ಪೊಲೀಸರು ಹೈದರಾಬಾದ್ ನ ನರಸಿಂಗಿಯಲ್ಲಿ ಬಂಧಿಸಿದ್ದಾರೆ. ಇಂದು ಆಕೆಗಾಗಿ ಚೆನ್ನೈನಿಂದ ವಿಶೇಷ ಪೊಲೀಸ್ ತಂಡ ಹೈದರಾಬಾದ್‌ಗೆ ಬಂದಿತ್ತು. ಕಸ್ತೂರಿ ಬಂಧನದ ನಂತರ ಅವರನ್ನು ಚೆನ್ನೈಗೆ ಶಿಫ್ಟ್ ಮಾಡಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page