Friday, June 20, 2025

ಸತ್ಯ | ನ್ಯಾಯ |ಧರ್ಮ

ಹಿಂದೂ ಯುವತಿಯರೇ ಎಚ್ಚರ! ಇದು ಮೀಸೆ ಚಿಗುರದ ಬಲಪಂಥೀಯ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್!

ಎಚ್ಚರ! ಎಚ್ಚರ!! ಎಚ್ಚರ!!!
ಕಾಲೇಜು ಕಲಿಕೆಯ ಹಂತದ ವಿದ್ಯಾರ್ಥಿ ದಿಸೆಯಲ್ಲಿ ಸಂಘಟನೆ ಕಟ್ಟಿ ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಆದರೆ ಅದು ಯಾವಾಗ ಧರ್ಮ, ಸಂಸ್ಕೃತಿ ಉಳಿಸುವ ವಿದ್ಯಾರ್ಥಿ ಸಂಘಟನೆಯಾಗೋಕೆ ಹೊರಟಿತೋ ಆಗಲೇ ವಿದ್ಯೆಯ ಮತ್ತು ಸಂಘಟನೆಯ ಮೂಲ ಆಶಯವೇ ಹಳ್ಳ ಹಿಡಿಯಲು ಪ್ರಾರಂಭವಾಯಿತು. ಅಂದಹಾಗೆ ಇದು ಧರ್ಮ ಮತ್ತು ಸಂಸ್ಕೃತಿ ಉಳಿಸಲು ಹೊರಟು ತನ್ನ ನೈಜ ಸಂಸ್ಕೃತಿ ಹೊರಹಾಕಿದ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನ ಕಥೆಯಿದು.

ಸಧ್ಯ ಈಗ ನಾವು ಹೇಳೋಕೆ ಹೊರಟಿರೋದು ತೀರ್ಥಹಳ್ಳಿ ಭಾಗದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ವಿಧ್ಯಾರ್ಥಿ ಘಟ್ಟದಿಂದಲೇ ಉಳಿಸ ಹೊರಟಿರುವ ಬಲಪಂಥೀಯ ವಿಧ್ಯಾರ್ಥಿ ಸಂಘಟನೆಯ ಪ್ರತೀಕ್‌ ಗೌಡ ಎಂಬ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳೋದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ತೀರ್ಥಹಳ್ಳಿ ತಾಲ್ಲೂಕಿನ ಈ ಸಂಘಟನೆಯ ಮುಂಚೂಣಿ ಯುವನಾಯಕನ ಕಾಮದಾಟ ಈಗ ಇಲ್ಲಿನ ಪಡ್ಡೆ ಹೈಕಳ ಮೊಬೈಲ್ ಗಳಲ್ಲಿ ಗುಪ್ತ್ ಗುಪ್ತಾಗಿ ಹರಿದಾಡುತ್ತಿದೆ.

ಕಠೋರ ಹಿಂದೂ ಹುಲಿ’ಯೊಂದರ ಸೆಕ್ಸ್ ಸ್ಕ್ಯಾಂಡಲ್ ಬ್ಲಾಕ್ಮೇಲ್ ದಂಧೆ.!
ಬಿಜೆಪಿ ಪಕ್ಷ ಮತ್ತು ಬಲಪಂಥೀಯ ಸಂಘಟನೆ ಹಾಗೂ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಎಲ್ಲಾ ವೇದಿಕೆಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ತೀರ್ಥಹಳ್ಳಿ ಘಟಕದ ಅಧ್ಯಕ್ಷ, ‘ಕಠೋರ ಹಿಂದೂ’ ಪ್ರತೀಕ್‌ ಗೌಡನೇ ಈ ಸ್ಟೋರಿಯ ಹೀರೋ ಕಂ ವಿಲನ್.

ಈತ ಮಾಡಿರೋ ಅಯೋಗ್ಯ ಕೆಲಸಕ್ಕೆ ಇಡೀ ತೀರ್ಥಹಳ್ಳಿಯ ಜನತೆ ಮುಜುಗರಕ್ಕೆ ಸಿಕ್ಕಿದಂತಾಗಿದೆ. ಹೇಳಿಕೊಳ್ಳೋಕೆ ತಾನೊಬ್ಬ ದೊಡ್ಡ ಸಂಸ್ಕೃತಿಯ ವಕ್ತಾರ ಎಂಬಂತೆ ಇಲ್ಲಿಯವರೆಗೆ ಪೋಸು ಕೊಡುತ್ತಿದ್ದಾತ ಈಗ ಈತನ ಕಾಮಕೇಳಿ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಟ್ಟ ಕೆಲಸ ಕ್ಷಮಿಸಲಾರದ್ದು.

ತೀರ್ಥಹಳ್ಳಿ ಸಮಜವಾದದ ತವರು. ಒಬ್ಬ ಮುಖ್ಯಮಂತ್ರಿ, ಒಬ್ಬ ಪ್ರಖರ ಸಮಾಜವಾದಿ ಮತ್ತು ಎರಡು ಜ್ಞಾನಪೀಠವನ್ನು ತನ್ನ ಮಡಿಲಿಗೆ ಹಾಕಿಕೊಂಡ ಅಪ್ಪಟ ಜಾತ್ಯತೀತ ನೆಲೆಗಟ್ಟಿನ ನೆಲ. ಅಂತರಾಷ್ಟ್ರೀಯ ಮಟ್ಟದಲ್ಲಿ ತೀರ್ಥಹಳ್ಳಿ ಅಂದಾಕ್ಷಣ ಮೊದಲ ಪಂಕ್ತಿಯಲ್ಲಿ ಬರುವ ಹೆಸರುಗಳೇ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು, ಅನಂತಮೂರ್ತಿ, ಹಾಮಾ ನಾಯಕ್ ರಂತಹ ಮಹಾನುಭಾವರು. ಆದರೆ ಇಂತಹ ತೀರ್ಥಹಳ್ಳಿಗಳು ಇಲ್ಲಿ ನಡೆಯುವ ಕುಕೃತ್ಯಗಳು ಈಗ ತಲೆ ತಗ್ಗಿಸುವಂಥ ಅವಮಾನಕ್ಕೆ ಗುರಿಯಾಗ್ತಿದೆ.

ತನ್ನದೇ ನೇತೃತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ವಿದ್ಯಾರ್ಥಿನಿಯರನ್ನು ಸಂಘಟನೆ ಹೆಸರಿನಲ್ಲಿ ಪರಿಚಯಮಾಡಿಕೊಂಡು, ಆತ್ಮೀಯನಾಗಿ, ಹಿಂದುತ್ವದ ಕೊಮುದ್ವೇಷದ ಅಮಲೇರಿಸಿ ನಂತರ ಅವರನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ. ಈತನ ‘ಹೀರೋಯಿಸಂ’ ನೋಡಿ ಮರುಳಾದ ಒಂದಷ್ಟು ವಿಧ್ಯಾರ್ಥಿನಿಯರು ಈತನ ಬ್ಲಾಕ್ಮೇಲ್ ಬಲೆಗೆ ಬಿದ್ದು ಈಗ ತಾವು ಮಾಡಿದ ತಪ್ಪಿಗೆ ಕೊರಗುತ್ತಿದ್ದಾರೆ.

ಈ ಕೃತ್ಯ ಕೇವಲ ಅವರವರ ನಡುವೆ ನಡೆದು ಮುಗಿದು ಹೋಗುವಂತದ್ದಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಪ್ರತೀಕ್‌ ಗೌಡ ಕೆಲವು ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ನಗ್ನವಾಗಿಸಿ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಲು ಶುರುವಿಟ್ಟುಕೊಂಡದ್ದೇ ಈಗ ದೊಡ್ಡ ಸುದ್ದಿಯಾಗಿ ತೀರ್ಥಹಳ್ಳಿ ಭಾಗದ ಜನ ಬಾಯಿ ಮೇಲೆ ಬೆರಳಿಡುವಂತಹ ಕೆಲಸವಾಗಿದೆ.

ಈಗಾಗಲೇ ಈ ‘ಕಠೋರ ಹಿಂದೂ ಹುಲಿ’ಯ ಬ್ಲಾಕ್ಮೇಲ್ ಮಾದರಿಯ ಹಲವಾರು ವಿಡಿಯೋಗಳು ಇದ್ದು, ಸಧ್ಯ ಇದೀಗ 2 ವಿಡಿಯೋಗಳು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಆಘಾತಕಾರಿ ವಿಚಾರವೆಂದರೆ ತನ್ನ ನೇತೃತ್ವದ ಸಂಘಟನೆಯಲ್ಲೇ ಗುರುತಿಸಿಕೊಂಡ ಹತ್ತಾರು ಯುವತಿಯರ ಜೊತೆಗೆ ಈತ ಈ ರೀತಿಯ ಕೃತ್ಯ ನಡೆಸಿ ನಂತರ ಹಣಕ್ಕೆ ಮತ್ತು ಮಂಚಕ್ಕೆ ಕರೆದು ಬ್ಲಾಕ್ಮೇಲ್ ಮಾಡಲು ಶುರು ಮಾಡಿಕೊಂಡಿದ್ದ ಎಂಬುದು ಈ ಭಾಗದ ಜನ ಮಾತಾಡುತ್ತಿದ್ದಾರೆ. ತನ್ನ ಬಲೆಗೆ ಬಿದ್ದ ಪ್ರತೀ ಹೆಣ್ಣು ಮಕ್ಕಳ ಬಳಿಯೂ ಹತ್ತು, ಇಪ್ಪತ್ತು ಮೂವತ್ತು ಸಾವಿರಕ್ಕೆ ಈತ ಬ್ಲಾಕ್ಮೇಲ್ ಮಾಡುತ್ತಿದ್ದ ಬಗ್ಗೆಯೂ ವಂಚನೆಗೊಳಗಾದ ಯುವತಿಯರು ಈಗ ಕಣ್ಣೀರಿಡುತ್ತಿದ್ದಾರಂತೆ. ಜೊತೆಗೆ ಆತನ ನೇತೃತ್ವದ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ.

ಸಧ್ಯ ಈ ‘ಕಠೋರ ಹುಲಿ’ಯದು ಹೊರ ಬಿದ್ದಿರುವುದು ಎರಡು ವೀಡಿಯೊ. ಆದರೆ ಈ ರೀತಿಯ ಹತ್ತಾರು ವಿಡಿಯೋ ಇಟ್ಟುಕೊಂಡು ಹತ್ತಾರು ಹೆಣ್ಣು ಮಕ್ಕಳ ಬಳಿಯೂ ಈತ ಬ್ಲಾಕ್ಮೇಲ್ ದಂಧೆ ನಡೆಸುತ್ತಿದ್ದ ಎಂಬ ಗುಮಾನಿಯಿದೆ. ಈ ಬಗ್ಗೆ ಈಗ ತೀರ್ಥಹಳ್ಳಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಆ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವತಿಯರ ಬಗ್ಗೆ ಅನುಮಾನದ ಕಣ್ಣಿಂದ ನೋಡುವ ದುಸ್ಥಿತಿ ಬಂದಿದೆ ಎಂದರೆ ತಪ್ಪಿಲ್ಲ.

ಈಗಾಗಲೇ ಸಮಾಜದ, ತಾಲ್ಲೂಕಿನ ಮತ್ತು ವಿಧ್ಯಾರ್ಥಿಗಳ ವಲಯದಲ್ಲಿ ಸ್ವಾಸ್ಥ್ಯ ಕೆಡುವಂತೆ ಮಾಡಿದ ಈತನ ಮೇಲೆ NSUI ಸಂಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಹಾಗೆಯೇ ಈತನ ವಂಚನೆಯ ಜಾಲಕ್ಕೆ ಬಿದ್ದ ಹೆಣ್ಣು ಮಕ್ಕಳೂ ಸಹ ಈತನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡಾ ಹೊರಬರುತ್ತಿದೆ. ಆದರೆ ಸ್ಟೋರಿಯ ‘ಹೀರೋ ಕಂ ವಿಲನ್’ ಪ್ರತೀಕ್‌ ಗೌಡ ಈಗ ತಲೆಮರೆಸಿಕೊಂಡಿದ್ದಾನೆ. ಆತ ಸಿಕ್ಕಿದ ನಂತರ ಆತನ ಬಳಿ ಎಷ್ಟು ವಿಡಿಯೋಗಳಿವೆ, ಎಷ್ಟು ಯುವತಿಯರ ಜೊತೆಗೆ ಈ ರೀತಿ ಬ್ಲಾಕ್ಮೇಲ್ ದಂಧೆ ಮಾಡಿಕೊಂಡು ಬಂದಿದ್ದ, ವಂಚನೆಗೊಳಗಾದ ಹೆಣ್ಣು ಮಕ್ಕಳು ಎಷ್ಟು ಮಂದಿ ಎಂಬುದು ಹೊರಬರಬೇಕಿದೆ.

ಒಟ್ಟಾರೆ ಹೇಳುವುದಾದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಗುರುತಿಸಿಕೊಂಡವವರು ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಗುರುತಿಸಿಕೊಂಡು ವಿರೋಧಿಗಳ ಕಡೆಯಿಂದ ‘ಬ್ಲೂಜೆಪಿ’ ಅನ್ನಿಸಿಕೊಳ್ಳುತ್ತಿರುವುದಕ್ಕೆ ಈ ಸ್ಟೋರಿ ಕೂಡಾ ಒಂದು ಹೊಸ ಸೇರ್ಪಡೆ. ಎಚ್ಚರಿಕೆ ವಹಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕಾಲೇಜು ಯುವತಿಯರು ಇಂತವರ ನೇತೃತ್ವದ ಸಂಘಟನೆಗಳಲ್ಲಿ ಗುರುತಿಸಿಕೊಂಡರೂ, ತಾವು ಗುರುತಿಸಿಕೊಳ್ಳುವ ಸಂಘಟನೆ ಮತ್ತು ಅದರ ಮುಖ್ಯಸ್ಥರು ಎಷ್ಟು ಸಾಚಾ ಇದ್ದಾರೆ, ಅಲ್ಲಿ ಗುರುತಿಸಿಕೊಂಡರೆ ತಮ್ಮ ಹೆಸರು ಮತ್ತು ಬೆಲೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page