Thursday, September 12, 2024

ಸತ್ಯ | ನ್ಯಾಯ |ಧರ್ಮ

ತೋಟಗಾರಿಕೆ ಹಾಗೂ ನರ್ಸರಿ ಆಸಕ್ತರಿಗೆ ಇಲ್ಲೊಂದು ಅವಕಾಶ!

ತೋಟಗಾರಿಕೆ ಮತ್ತು ನರ್ಸರಿ ಪರಸ್ಪರ ಸಂಬಂಧಿತ ವಿಷಯಗಳು. ತೋಟಗಾರಿಕೆಯಿಂದ ದುಡಿಯುವುದಕ್ಕಿಂತಲೂ ಹೆಚ್ಚು ಹಣವನ್ನು ನರ್ಸರಿ ಮೂಲಕ ಕೆಲವರು ಸಂಪಾದಿಸುತ್ತಾರೆ. ನಿಮಗೂ ಈ ನರ್ಸರಿ ಕುರಿತು ಆಸಕ್ತಿಯಿದ್ದರೆ ಇದನ್ನು ಪ್ರಯತ್ನಿಸಬಹುದು.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸೆ. 30ರಿಂದ ತೋಟಗಾರಿಕೆಯಲ್ಲಿ ನರ್ಸರಿ ಬಗ್ಗೆ ಮೂರು ತಿಂಗಳುಗಳ ಸರ್ಟಿಫಿಕೇಟ್ ಕೋರ್ಸ್ ನಡೆಸಲು ಉದ್ದೇಶಿಸಿದ್ದು, ಅರ್ಹ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಸೆಪ್ಟೆಂಬರ್ 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ವಿವಿಯ ಸಹಾಯಕ ಪ್ರೋಫೆಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವಿಜ್ಞಾನಿಗಳಾದ ಡಾ. ಬಿ.ವಿ ಚಂಪ- 7338582371, ಡಾ. ಭರತ್ ಕುಮಾರ್ ಎಂ.ವಿ.-8277206549 ಮತ್ತು ಡಾ. ರವಿಶಂಕರ್ ಎಂ.ಪಾಟೀಲ್-9916426892 ಇವರುಗಳನ್ನು ಸಂಪರ್ಕಿಸಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page