Sunday, June 22, 2025

ಸತ್ಯ | ನ್ಯಾಯ |ಧರ್ಮ

“ನಾನು ರಾಮಭಕ್ತ, ದೇಶಭಕ್ತ.. ಆದರೆ ಅಂಧಭಕ್ತನಲ್ಲ!” – ಉದ್ಧವ್ ಠಾಕ್ರೆ

“ರಾಮಮಂದಿರ ನಿರ್ಮಾಣ ನನ್ನ ತಂದೆ ಬಾಳಾಸಾಹೇಬ್ ಠಾಕ್ರೆಯವರ ಕನಸು. ಈ ಬಗ್ಗೆ ಹೆಮ್ಮೆಯಿದೆ. ನಾನೂ ಕೂಡಾ ರಾಮಭಕ್ತ, ದೇಶಭಕ್ತ.. ಆದರೆ ಅಂಧಭಕ್ತನಲ್ಲ” ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಹೇಳಬೇಕೆಂದರೆ ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೆರವೇರಿಸಬೇಕು. ಏಕೆಂದರೆ ಗುಜರಾತ್‌ನ ಸೋಮನಾಥ ದೇವಾಲಯವನ್ನು ಪುನಃಸ್ಥಾಪಿಸಿದ ನಂತರ, ದೇಶದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಅವರು ಔಪಚಾರಿಕ ಜೀರ್ಣೋದ್ಧಾರ ಸಮಾರಂಭವನ್ನು ನಡೆಸಿದ್ದರು. ಆದರೆ ರಾಷ್ಟ್ರಪತಿ ಅವರನ್ನು ಈ ಕಾರ್ಯಕ್ರಮದಿಂದ ಹೊರಗಿಟ್ಟಿದ್ದು, ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂದು ಬಿಂಬಿತವಾಗಿದೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ರಾಷ್ಟ್ರಪತಿಗಳು ರಾಷ್ಟ್ರೀಯ ಹೆಮ್ಮೆ ಮತ್ತು ದೇಶದ ಸ್ವಾಭಿಮಾನದ ಸಂಕೇತ. ಹೀಗಾಗಿ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ನಾಸಿಕ್‌ನ ಗೋದಾವರಿ ನದಿ ದಡದ ಕಲಾರಾಮ್ ದೇವಸ್ಥಾನದಲ್ಲಿ ಮಹಾ ಆರತಿ ಸಮಾರಂಭ ನಡೆಸಲಾಗುತ್ತಿದೆ. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿದ್ದೇನೆ” ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

“ಇತ್ತ ಶಂಕರಾಚಾರ್ಯ ಸ್ಥಾಪಿತ ಎಲ್ಲಾ ಮಠಗಳು ರಾಮಮಂದಿರ ಪ್ರತಿಷ್ಠಾಪನೆಯಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಕಾರಣ ಇನ್ನೂ ಪೂರ್ಣವಾಗದ ಮಂದಿರ ಉದ್ಘಾಟನೆಗೆ ಯೋಗ್ಯವಲ್ಲ. ಆದರೆ ಬಿಜೆಪಿ ಲೋಕಸಭಾ ಚುನಾವಣೆ ಗುರಿಯಾಗಿಟ್ಟುಕೊಂಡು ತರಾತುರಿಯ ಉದ್ಘಾಟನೆ ನಡೆಸುತ್ತಿದೆ. ಇದು ಸ್ಪಷ್ಟವಾಗಿ ರಾಜಕೀಯ ಪ್ರೇರಿತ” ಎಂದು ತಿಳಿಸಿದ್ದಾರೆ‌.

ಇನ್ನು ನಾಸಿಕ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಆರ್‌ಎಸ್‌ಎಸ್ ಮುಖಂಡ ರಾಮ್ ಲಾಲ್ ಮತ್ತು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಸೇರಿದಂತೆ ನಿಯೋಗ ಅಧ್ಯಕ್ಷ ಮುರ್ಮು ಅವರನ್ನು ಭೇಟಿ ಮಾಡಿದೆ. 1992 ರಲ್ಲಿ ‘ಕರ ಸೇವೆ’ಯ ಭಾಗವಾಗಿದ್ದ ಶಿವಸೈನಿಕರನ್ನು ನಾಸಿಕ್‌ನಲ್ಲಿಯೂ ಸನ್ಮಾನಿಸಲಾಗುವುದು ಎಂದು ಠಾಕ್ರೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page