Tuesday, April 8, 2025

ಸತ್ಯ | ನ್ಯಾಯ |ಧರ್ಮ

ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ಇರುವೆ – ಸಂಸದ ಶ್ರೇಯಸ್ ಪಟೇಲ್

ಹಾಸನ: ರಾಜಕಾರಣಿಗಳು ಐದು ವರ್ಷಗಳ ಕಾಲ ಒತ್ತಡದಿಂದ ಇದ್ದರೇ ನೌಕರರು ಅವಧಿ ಮುಗಿಯುವವರೆಗೂ ಒತ್ತಡ ಇರುತ್ತಾರೆ. ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಕಂಡಿತವಾಗಿ ಇರುತ್ತೇನೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ವಿಶ್ವಾಸವ್ಯಕ್ತಪಡಿಸಿದರು.

 ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಮಸ್ಕೃತಿಕ ಸ್ಪರ್ದೆ ಕಾರ್ಯಕ್ರಮದಲ್ಲಿ ಜ್ಯೋತಿ ಬರಮಾಡಿಕೊಂಡು ಮಾತನಾಡಿದ ಅವರು, ಸರಕಾರದ ಕಾರ್ಯಾಂಗವಾಗಿ ಸರಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಕ್ರೀಡಾಕೂಟವನ್ನು ಜಿಲ್ಲಾಧ್ಯಕ್ಷರಾದ ಬಿ.ಪಿ. ಕೃಷ್ಣೇಗೌಡರು ಆಯೋಜನೆ ಮಾಡಿದ್ದು, ಜಿಲ್ಲಾಧ್ಯಕ್ಷರಾದ ಮೇಲೆ ಮೊದಲ ಕೆಲಸ ನೌಕರರ ಸಂಘದ ಕಟ್ಟಡದ ದುರಸ್ತಿ ಕಾರ್ಯ ಮಾಡುತ್ತಿರುವುದು ಉತ್ತಮವಾಗಿದೆ. ರಾಜಕಾರಣಿಗಳಿಗೆ ಎಷ್ಟು ಒತ್ತಡ ಇರುತ್ತದೆ ಅದರ ಎರಡರಷ್ಟು ಒತ್ತಡ ನೌಕರರಿಗೆ ಇರುತ್ತದೆ. ನಾವು ಐದು ವರ್ಷ ನಾವು ಈ ಒತ್ತಡ ಅನುಭವಿಸುತ್ತೇವೆ. ಆದರೇ ನೀವು ಅವಧಿ ಮುಗಿಯುವವರೆಗೂ ಒತ್ತಡ ಇರುವುದು ಒಂದು ಕಡೆ ಬೇಸರದ ವಿಚಾರ ಎಂದರು. ದಿನದ ಒಂದುವರೆ ಗಂಟೆಗಳ ಕಾಲವಾದರೂ ತಮ್ಮ ಕುಟುಂಬ ಆರೋಗ್ಯದ ಕಡೆ ನೀವು ಗಮನಹರಿಸಬೇಕು. ಆರೋಗ್ಯ ಚನ್ನಾಗಿದ್ದರೇ ನಮ್ಮ ಕುಟುಂಬ ಚನ್ನಾಗಿರುತ್ತದೆ. ಎಲ್ಲಾರೂ ಆರೋಗ್ಯದ ಕಡೆ ಗಮನಕೊಡಬೇಕು. ನಾವು ಕೆಲಸ ಮಾಡಿಸೊದು, ನೌಕರರು ಕೆಲಸ ಮಾಡುವುದು ಒಂದು ರೀತಿ ಸಾರ್ವಜನಿಕರ ಒತ್ತಡ ಹೆಚ್ಚು ಇರುತ್ತದೆ ಎಂದು ಕಿವಿಮಾತು ಹೇಳಿದರು. ಕೋಪಕ್ಕೆ ಒಂದು ಮದ್ದು ಇದ್ದರೇ ಧ್ಯಾನ. ಎಲ್ಲಾ ನೌಕರರು ಕೆಲ ಸಮಯ ಮೀಸಲಿಡಿ. ನೌಕರರ ಕ್ಷೇಮಾಭಿವೃದ್ಧಿಗೆ ಕಂಡಿತ ದುಡಿಯುವ ಕೆಲಸ ಮಾಡಲಾಗುವುದು. ಶಾಸಕರಾದ ಸ್ವರೂಪ್ ಮತ್ತು ನಾನು ಒಟ್ಟಿಗೆ ಸೇರಿ ನಿಮ್ಮ ಜೊತೆ ಇರುತ್ತೇವೆ. ಯಾವುದೇ ರೀತಿ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಒಳಗಾಗಬೇಡಿ. ಆರೋಗ್ಯವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಆಡಳಿತ ಮತ್ತು ನೌಕರರ ಸ್ನೇಹಿಯಾಗಿ ನಾನು ಕಂಡಿತವಾಗಿ ಇರುತ್ತೇನೆ ಎಂದು ಹೇಳಿದರು.
ಶಾಸಕ ಹೆಚ್.ಪಿ. ಸ್ವರೂಪ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಎಂದರೇ ಕ್ರಿಯಾಶೀಲ ಅಧ್ಯಕ್ಷರು. ಸಂಘವನ್ನು ಒಗ್ಗಟ್ಟಿನಿಂದ ಕೊಂಡೂಯ್ಯುತ್ತಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಇರಲಿ ಕಾರ್ಯಾಂಗ ಒತ್ತಡದಿಂದ ಕೆಲಸ ಮಾಡಬೇಕು. ಪ್ರತಿನಿತ್ಯ ಕೆಲಸದ ಒತ್ತಡ ಇದ್ದರೂ ಕುಟುಂಬಕ್ಕೆ ಕೆಲ ಸಮಯ ಕೊಡಬೇಕು. ಸುಖ, ಶಾಂತಿ ಜೊತೆ ನೆಮ್ಮದಿ ಇರಬೇಕು. ದೊಡ್ಡ ಮಟ್ಟದ ಕ್ರೀಡಾಕೂಡ ಹಮ್ಮಿಕೊಳ್ಳಲಾಗಿದ್ದು, ಸಂಜೆಯ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ನೌಕರರು ಎಂದರೇ ಅತ್ಯುತ್ತಮ ನೌಕರರೆಂದು ಪ್ರಶಸ್ತಿ ಕೊಡುತ್ತೇವೆ. ಕ್ರೀಡೆ ಮುಖ್ಯ ಏಕೆ ಎಂದರೇ ನಮ್ಮ ಆರೋಗ್ಯ ಸ್ವಸ್ಥ್ಯತೆ ಇರಬೇಕು. ನಾವು ಎಷ್ಟು ಆರೋಗ್ಯವಾಗಿದ್ದೇವೆ ಎಂಬುದನ್ನು ತಮ್ಮ ಹೊಟ್ಟೆ ನೋಡಿಕೊಂಡು ಹೇಳಬೇಕು ಎಂದರು. ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮುಖ್ಯ. ಸರಿಯಾದ ಸಮಯಕ್ಕೆ ಊಟ ಮಾಡಿ, ಜೊತೆಗೆ ಯೋಗಾಸನ ಮಾಡಬೇಕು ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಸಮತೋಲನ ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದರು. ಏನು ಎಷ್ಟು ಸಂಪಾದನೆ ಮಾಡಿದರೇ ಪ್ರಯೋಜನ ಮೊದಲು ಆರೋಗ್ಯದ ಬಗ್ಗೆ ಗಮನಕೊಡಬೇಕು. ಪ್ರತಿ ಆತ್ಮದಲ್ಲೂ ಭಗವಂತ ಇರುತ್ತಾನೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಹೊಟ್ಟೆ ದಪ್ಪ ಇದ್ದವರು ಮಾತ್ರವಲ್ಲ. ಹೊಟ್ಟೆಕಿಚ್ಚು, ದುರಂಕಾರ ಇದ್ದವರು ಸಣ್ಣಗಿದ್ದರೂ ಹೃದಯಾಘಾತವಾಗುತ್ತದೆ. ಸಣ್ಣ ಸಣ್ಣ ವಿಚಾರಗಳಿಗೆ ಗಂಡ ಹೆಂಡತಿ ಬೇರೆ ಆಗುತ್ತಿದ್ದಾರೆ. ಸರಕಾರಿ ನೌಕರರು ಸೂಕ್ಷ್ಮವಂತರಾಗಬೇಕು. ಯಾರೆ ನಿಮ್ಮ ಕಛೇರಿಗೆ ಬಂದರೂ ನೀವು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ, ಮನಸ್ಸನ್ನು ಕಠಿಣ ಮಾಡಿಕೊಳ್ಳಬಾರದು. ಸರಕಾರಿ ನೌಕರರು ಯಾರ ಒಬ್ಬರ ಪರವಾಗಿ ಇರಬಾರದು. ಮಹಿಳೆಯರು ಎಲ್ಲಾದರಲ್ಲೂ ಮುಂದೆ ಇದ್ದಾರೆ. ಆರೋಗ್ಯಕ್ಕೆ ರಾಗಿ ಮುದ್ದೆ ಉತ್ತಮ. ನಿಮ್ಮ ಕುಟುಂಬಕ್ಕಾಗಿ ನಿಮ್ಮ ಆರೋಗ್ಯದ ಕಡೆ ಗಮನಕೊಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ನಾಯ್ಡ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಉಪಾಧ್ಯಕ್ಷ ಕೆ.ವಿ. ಪಾರ್ಥೇಶ್, ಹೆಚ್.ವಿ. ಪಲ್ಲವಿ. ಕ್ರೀಡಾ ಕಾರ್ಯದರ್ಶಿ ಆರ್. ಆಶಾ, ಖಜಾಂಚಿ ಕೆ.ಆರ್. ಹೇಮಂತ್, ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಲಕ್ಷ್ಮೀಕಾಂತ್, ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಈ ಕೃಷ್ಣೇಗೌಡ, ನಾಯಕರಹಳ್ಳಿ ಮಂಜೇಗೌಡ ಇತರರು ಉಪಸ್ಥಿತರಿದ್ದರು.

;;;;;;;;;;;;;;;;;;;;;;;; ;;;;;;;;;;;;;;;;;;;;;;;;;

Related Articles

ಇತ್ತೀಚಿನ ಸುದ್ದಿಗಳು

You cannot copy content of this page