Home ದೇಶ ದೆಹಲಿ ದುರಂತಕ್ಕೆ ಸರಕಾರಿ ಸಂಸ್ಥೆಗಳ ಬೇಜವಾಬ್ದಾರಿಯೇ ಪ್ರಮುಖ ಕಾರಣ: ರಾಹುಲ್ ಗಾಂಧಿ

ದೆಹಲಿ ದುರಂತಕ್ಕೆ ಸರಕಾರಿ ಸಂಸ್ಥೆಗಳ ಬೇಜವಾಬ್ದಾರಿಯೇ ಪ್ರಮುಖ ಕಾರಣ: ರಾಹುಲ್ ಗಾಂಧಿ

0

ದೆಹಲಿ: ದೆಹಲಿಯ ರಾಜಿಂದರ್ ನಗರದಲ್ಲಿನ ಕೋಚಿಂಗ್ ಸೆಂಟರ್‌ಗೆ ಮಳೆ ನೀರು ನುಗ್ಗಿ ಸಿವಿಲ್ಸ್‌ಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ಕಳಪೆ ಕಟ್ಟಡ ಯೋಜನೆ, ಅಸುರಕ್ಷಿತ ನಿರ್ಮಾಣ ಹಾಗೂ ಸರಕಾರಿ ಸಂಸ್ಥೆಗಳ ಬೇಜವಾಬ್ದಾರಿಗೆ ಜನ ಸಾಮಾನ್ಯರು ಬೆಲೆ ತೆರಬೇಕಾಗಿದೆ ಎಂದರು. ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಘಟನೆಯು ವ್ಯವಸ್ಥೆಗಳ ಸಂಯೋಜಿತ ವೈಫಲ್ಯವಾಗಿದೆ. ಅಸುರಕ್ಷಿತ ನಿರ್ಮಾಣ, ಕಳಪೆ ಕಟ್ಟಡ ಯೋಜನೆ ಮತ್ತು ಸಂಸ್ಥೆಗಳ ಬೇಜವಾಬ್ದಾರಿಯಿಂದ ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುರಕ್ಷಿತ ಮತ್ತು ನೆಮ್ಮದಿಯ ಜೀವನ ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಒದಗಿಸುವುದು ಸರ್ಕಾರಗಳ ಜವಾಬ್ದಾರಿ ಎಂದು ‘ಎಕ್ಸ್’ ಖಾತೆಯಲ್ಲಿ ರಾಹುಲ್ ಬರೆದಿದ್ದಾರೆ.

ಈ ಮಧ್ಯೆ, ಕೋಚಿಂಗ್ ಸೆಂಟರ್ ಮಾಲೀಕ ಮತ್ತು ಸಂಯೋಜಕರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

You cannot copy content of this page

Exit mobile version