Monday, July 28, 2025

ಸತ್ಯ | ನ್ಯಾಯ |ಧರ್ಮ

ನೇರ ಯುದ್ಧ ಕಣಕ್ಕಿಳಿದ ಇರಾನ್, ಇಸ್ರೇಲ್ ಮೇಲೆ ಏಕಕಾಲಕ್ಕೆ 400 ಕ್ಷಿಪಣಿಗಳಿಂದ ದಾಳಿ

ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಮೋಡ ಕವಿದಿದೆ. ಕಳೆದ ಜುಲೈನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ, ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಮತ್ತು ಅದರ ಜನರಲ್ ಅಬ್ಬಾಸ್ ನಿಲ್ಪೋರುಶನ್ ಹತ್ಯೆಗೆ ಪ್ರತೀಕಾರದಿಂದ ಇರಾನ್ ಹೊತ್ತಿ ಉರಿಯುತ್ತಿದೆ.

ಇಸ್ರೇಲ್ ವೈಮಾನಿಕ ದಾಳಿಯಿಂದ ನಲುಗಿದೆ.

ಜೆರುಸಲೆಮ್ ಮತ್ತು ಟೆಲ್ ಅವೀವ್ ಮೇಲೆ ಏಕಕಾಲದಲ್ಲಿ 400 ಕ್ಷಿಪಣಿಗಳ ದಾಳಿ ನಡೆಸಲಾಯಿತು. ಇರಾನ್‌ಗೆ ಬೆಂಬಲವಾಗಿ, ಹಿಜ್ಬುಲ್ಲಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ಉಡಾಯಿಸಿತು. ಇಸ್ರೇಲ್‌ನ ಅನೇಕ ನಗರಗಳ ಅನೇಕ ಭಾಗಗಳಲ್ಲಿ ಕಟ್ಟಡಗಳು ನಾಶವಾದವು. ಇಸ್ರೇಲಿ ಸರ್ಕಾರವು ದೇಶದಾದ್ಯಂತ ಸೈರನ್‌ಗಳನ್ನು ಬಾರಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿತು. ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಹೇಳಲಾಯಿತು.

ಒಂದೆಡೆ, ಇರಾನ್ ಇಸ್ರೇಲ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವಾಗ ಟೆಲ್ ಅವೀವ್‌ನಲ್ಲಿ ಭಯೋತ್ಪಾದಕರನ್ನು ನಿಯೋಜಿಸಿದೆ. ಟೆಲ್ ಅವೀವ್‌ನ ಮೆಟ್ರೋ ನಿಲ್ದಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಚ್ಚೆತ್ತ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ.

ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ. ಟೆಲ್ ಅವಿವ್ ನಗರದಲ್ಲಿರುವವರು ಜಾಗರೂಕರಾಗಿರಿ ಮತ್ತು ಯಾರೂ ಹೊರಗೆ ಬಾರದಿರಿ ಎಂದು ಸೂಚಿಸಲಾಗಿದೆ.

ಇಸ್ರೇಲ್-ಇರಾನ್ ಯುದ್ಧವು ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ. ಪ್ರಪಂಚದಾದ್ಯಂತದ ದೇಶಗಳು ಪಶ್ಚಿಮ ಏಷ್ಯಾದಾದ್ಯಂತ ವಿಮಾನಗಳನ್ನು ರದ್ದುಗೊಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page