Thursday, June 19, 2025

ಸತ್ಯ | ನ್ಯಾಯ |ಧರ್ಮ

ತಮ್ಮ ವಿರುದ್ಧ ಹನಿಟ್ರ್ಯಾಪ್​​​ಗೆ ವಿಫಲ ಯತ್ನ ಗೃಹ ಸಚಿವರಿಗೆ ದೂರು ನೀಡಿದ ಕೆ ರಾಜ‍ಣ್ಣ

ಬೆಂಗಳೂರು : ತಮ್ಮ ವಿರುದ್ಧ ಹನಿಟ್ರ್ಯಾಪ್​​​ಗೆ ವಿಫಲ ಯತ್ನವಾಗಿದೆ ಎಂದು ಸದನದಲ್ಲಿ ಸಚಿವ ಕೆ.ಎನ್​.ರಾಜಣ್ಣ ಅವರು ಗಂಭೀರವಾಗಿ ಆರೋಪ ಮಾಡಿದ್ದು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.ಈ ಸಂಬಂಧ ಸದನದಲ್ಲಿಯೂ ತನಿಖೆಗೆ ಮನವಿ ಮಾಡಿದ ಮೇಲೆ ಇದೂವರೆಗೂ ಪ್ರಕರಣ ಕುರಿತಂತೆ ದೂರ ನೀಡದ ರಾಜಣ್ಣ ಅವರು, ಇಂದು ಖುದ್ದು ಪರಮೇಶ್ವರ್ ಅವರನ್ನು ಭೇಟಿಯಾಗಿ ಸುಮಾರು 3 ಪುಟಗಳ ಲಿಖಿತ ದೂರು ನೀಡಿದ್ದಾರೆಂದು ವರದಿಯಾಗಿದೆ.

ಲಿಖಿತವಾಗಿ ರಾಜಣ್ಣ ಅವರು ಪರಮೇಶ್ವರ್ ಅವರಿಗೆ ದೂರು ನೀಡಿದ್ದು, ಈ ದೂರನ್ನು ವಿಧಾನಸೌಧ ವ್ಯಾಪ್ತಿಗೆ ಬರುವಂತಹ ಪೊಲೀಸ್​ ಠಾಣೆಗೆ ರವಾನೆ ಮಾಡುವ ಸಾಧ್ಯತೆ ಇದ್ದು, ಇಂದು ಸಾಯಂಕಾಲವೇ ಪ್ರಕರಣ ಕುರಿತು ತನಿಖಾ ಸಂಸ್ಥೆ ಬಗ್ಗೆಯೂ ನಿರ್ಧಾರವಾಗಲಿದ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಮೆಡಿಕಲ್​ ಕಾಲೇಜಿಗೆ ಭೇಟಿ ನೀಡಿ ಪರಮೇಶ್ವರ್​ ಅವರೊಂದಿಗೆ ರಾಜಣ್ಣ ಅವರು ಅನೌಪಚಾರಿಕವಾಗಿ ಚರ್ಚಿಸಿ ದೂರು ನೀಡಲು ನಿರ್ಧರಿಸಿದ್ದಾರೆ. ಈ ಕುರಿತಾದ ಕೆಲ ದಾಖಲೆಗಳ ಜೊತೆಗೆ 3 ಪುಟಗಳಲ್ಲಿ ಪ್ರಮುಖ ವಿಷಯಗಳನ್ನು ಪ್ರಕರಣದ ಕುರಿತಾಗಿ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.ಸುಮಾರು 48 ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ. ಅದರಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರೂ ಸಿಲುಕಿದ್ದಾರೆಂಬ ಆರೋಪವನ್ನು ರಾಜಣ್ಣ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page