ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರ ಇಲ್ಲಿ ಜರುಗುತ್ತಿರುವ ಹಿರಿ ಷಷ್ಟಿಯಲ್ಲಿ ಎಲ್ಲಾ ಧರ್ಮದವರೂ ವ್ಯಾಪಾರ ಮಾಡಲು ಮುಕ್ತ ಅವಕಾಶ ನೀಡುವುದರ ಮೂಲಕ ಗ್ರಾಮ ಪಂಚಾಯತ್ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮದವರೂ ಸಹಿಷ್ಣುತೆಯಿಂದ ಬಾಳುತಿದ್ದು ಕಾಳಾವರದಲ್ಲಿ ಯಾವುದೇ ಧರ್ಮ ವೈಷ್ಯಮ್ಯಗಳು ನಡೆದಿರುವುದಿಲ್ಲ.
ಇಲ್ಲಿ ಹಿಂದೂ, ಮುಸ್ಲಿಂ ಕೂಡಿ ಬಾಳುತಿದ್ದು ಸಾಮರಸ್ಯದಿಂದ ಇದ್ದಾರೆ. ಇಂತಹ ಸಂಧರ್ಭದಲ್ಲಿ ಧರ್ಮದ ತಳಹದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿ ಕೂಟ್ಟರೆ ಸಾಮರಸ್ಯ ಒಡೆದಂತೆ ಎಂದು ಭಾವಿಸಿದ ಗ್ರಾಮ ಪಂಚಾಯತ್ ಮಾದರಿ ನಡೆಯನ್ನು ಅನುಸರಿಸಿದೆ.
ಪಕ್ಷಾತೀತ ವಾಗಿ ಎಲ್ಲರೂ ಇದಕ್ಕೆ ಬೆಂಬಲಿಸಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಮೊನ್ನೆ ಬೆಂಗಳೂರಿನಲ್ಲೂ ಇಂತಹದ್ದೇ ಧರ್ಮ ದಂಗಲ್ ನಡೆಸಲು ಹೋಗಿ ಶಾಸಕ ಉದಯ್ ಗರುಡಾಚಾರ್ ಅವರು ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಅಲ್ಲದೆ ಉಡುಪಿಯಲ್ಲೂ ನಾಗರಿಕರೇ ಇಂತಹ ಪ್ರಯತ್ನಕ್ಕೆ ತಡೆಯೊಡ್ಡಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿದ್ದರು.