Friday, June 20, 2025

ಸತ್ಯ | ನ್ಯಾಯ |ಧರ್ಮ

ಕಾಂಚನ್‌ ಜರಿವಾಲಾ ನಾಪತ್ತೆ : ಬಿಜೆಪಿ ವಿರುದ್ದ ಎಎಪಿ ಕಿಡ್ನಾಪ್‌ ಆರೋಪ

ಗುಜರಾತ್‌: ಗುಜರಾತ್ ವಿಧಾನಸಭಾ ಚುನಾವಣೆ 2022ರ ಸೂರತ್‌ನ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ನಾಮಪತ್ರ ಅಂಗೀಕರಿಸಿದ ನಂತರ ಬಿಜೆಪಿ ಅವರನ್ನು  ಅಪಹರಿಸಿದೆ.ಅವರು ಮತ್ತು ಅವರ ಕುಟುಂಬದವರು ನಿನ್ನೆಯಿಂದ ಕಾಣೆಯಾಗಿದ್ದಾರೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅರವಿಂದ್‌ ಕೇಜ್ರೀವಾಲ್‌, “ಸೂರತ್ ಪೂರ್ವದಿಂದ ನಮ್ಮ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ಕಾಣೆಯಾಗಿದೆ. ಮೊದಲಿಗೆ, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತ್ತು. ಆದರೆ ಅವರ ನಾಮನಿರ್ದೇಶನವನ್ನು ಅಂಗೀಕರಿಸಿದ ನಂತರ, ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಲಾಯಿತು. ಇದೇ ಕಾರಣದಿಂದ ಅವರನ್ನು ಕಿಡ್ನಾಪ್‌ ಮಾಡಲಾಗಿದೆಯೇ ? ಎಂದು ಕೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page