Monday, June 23, 2025

ಸತ್ಯ | ನ್ಯಾಯ |ಧರ್ಮ

ಬಿ ವೈ ವಿಜಯೇಂದ್ರ ವಿರುದ್ಧದ ಚಟುವಟಿಕೆಯನ್ನು ತೀವ್ರಗೊಳಿಸಿದ ಬಿಜೆಪಿ ಭಿನ್ನಮತೀಯರು

ಬಿಜೆಪಿ ರಾಜ್ಯ ಘಟಕದೊಳಗಿನ ಅತೃಪ್ತ ನಾಯಕರ ಒಂದು ಬಣವು ಬಿ ವೈ ವಿಜಯೇಂದ್ರರನ್ನು ಪಕ್ಷದ ಮಧ್ಯಂತರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನವನ್ನು ಚುರುಕುಗೊಳಿಸಿದೆ.

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಅಮಿತ್‌ ಶಾ ಎದುರು ಈ ಬೇಡಿಕೆಯನ್ನು ಮಂಡಿಸಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಮತದ ಸೂಚನೆಯಾಗಿದೆ. ಒಮ್ಮೆ ತಣ್ಣಗಾದಂತೆ ಕಂಡಿದ್ದ ಭಿನ್ನಮತ ಈಗ ಮತ್ತೆ ಭುಗಿಲೆದ್ದಿದ್ದು, ಈ ಬಾರಿ ಅದು ಯಾರ ಅಮಾನತ್ತಿನೊಂದಿಗೆ ಕೊನೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಶಾ ಭೇಟಿಯ ದಿನ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್ ಮನೆಯಲ್ಲಿ ಸೀಮಿತ ಜನರಿರುವ ಆಂತರಿಕ ಸಭೆ ನಡೆಯಿತು. ಈ ಸಭೆಯ ನೇತೃತ್ವವನ್ನು ಮಾಜಿ ಸಚಿವ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಹಿಸಿದ್ದು, ಈ ಸಭೆಯಲ್ಲಿ ಹಲವಾರು ಪ್ರಮುಖ ಭಿನ್ನಮತೀಯ ನಾಯಕರು ಭಾಗವಹಿಸಿದ್ದರು.

ಈ ಗುಂಪಿನ ಅಭಿಪ್ರಾಯದ ಪ್ರಕಾರ, ಒಂದು ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪ, ದಿವಂಗತ ಡಾ. ವಿ.ಎಸ್. ಆಚಾರ್ಯ ಮತ್ತು ಎಚ್.ಎನ್. ಅನಂತ್ ಕುಮಾರ್ ಇಂತಹ ನಾಯಕರ ಮಾರ್ಗದರ್ಶನದಲ್ಲಿ ಸಿದ್ಧಾಂತಿಕ ಸ್ಪಷ್ಟತೆ ಮತ್ತು ಸಂಘಟನಾತ್ಮಕ ದೃಢತ್ವಕ್ಕೆ ಪ್ರಸಿದ್ಧವಾಗಿದ್ದ ಪಕ್ಷ, ಈಗ ದಿಕ್ಕು ತಪ್ಪಿದ್ದು, ಉತ್ಸಾಹವನ್ನು ಕಳೆದುಕೊಂಡಿದೆ.

ಇದು ಬಿಜೆಪಿಯನ್ನು ವಿರೋಧ ಪಕ್ಷವಾಗಿ ದುರ್ಬಲಗೊಳಿಸಿದ್ದು, ಸಿದ್ಧರಾಮಯ ಸರ್ಕಾರ ಈಗ ಯಾವುದೇ ಅಡೆತಡೆಯಿಲ್ಲದೆ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊ‍ಳ್ಳುತ್ತಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಆಕಾಂಕ್ಷಿಗಳಲ್ಲಿ ಲಿಂಗಾಯತ ಸಮುದಾಯದ ವಿ. ಸೋಮಣ್ಣ, ಬಸವರಾಜ್ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಇದ್ದಾರೆ ಎಂದು ತಿಳಿದುಬಂದಿದೆ, ಆದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಂದ ಬಂದ ಹಲವರು ಈ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ.




Related Articles

ಇತ್ತೀಚಿನ ಸುದ್ದಿಗಳು

You cannot copy content of this page