Wednesday, August 27, 2025

ಸತ್ಯ | ನ್ಯಾಯ |ಧರ್ಮ

ರಾಜಕೀಯ ನಾಟಕದಿಂದ ಧರ್ಮಸ್ಥಳವನ್ನು ದೂರವಿಡಿ: ಹೆಗ್ಗಡೆಯವರಿಗೆ ಡಿಕೆ ಶಿವಕುಮಾರ್ ಮನವಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಿದ್ದು, ಮುಂದಿನ ವಾರ ರಾಜ್ಯದಲ್ಲಿ ನಡೆಯಲಿರುವ ರಾಜಕೀಯ ನಾಟಕದಿಂದ ದೇಗುಲ ಮತ್ತು ಧರ್ಮಸ್ಥಳ ಪಟ್ಟಣವನ್ನು ದೂರವಿಡಬೇಕೆಂದು ಒತ್ತಾಯಿಸಿದ್ದಾರೆ.

ಧರ್ಮಸ್ಥಳದಲ್ಲಿ ಬಿಜೆಪಿ ತನ್ನ ರ‍್ಯಾಲಿಯನ್ನು ಕೊನೆಗೊಳಿಸುವುದನ್ನು ತಡೆಯುವಂತೆ ಹೆಗ್ಗಡೆಯವರನ್ನು ಕೋರಿದ ಶಿವಕುಮಾರ್, “ಧರ್ಮಸ್ಥಳವು ರಾಜಕೀಯದ ಕೇಂದ್ರವಾಗಬಾರದು. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನೀವು (ಹೆಗ್ಗಡೆ) ಅವಕಾಶ ನೀಡಬಾರದು” ಎಂದು ಹೇಳಿದರು.

ಇದೇ ವೇಳೆ, ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದಲ್ಲಿ ಬಂಧಿತರಾದವರು ಸಂಘ ಪರಿವಾರ ಮತ್ತು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ. ಅಲ್ಲದೆ, ಮುಖ್ಯ ವಿಷಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಟಕೀಯ ಪ್ರಸಂಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ದೂರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page