ನವದೆಹಲಿ: ರಾಜ್ಯಮಟ್ಟದ ಕಬ್ಬಡಿ ಆಟಗಾರ ಸುಷ್ಮಾಂತ್ ಆರೋಗ್ಯದ ಸಮಸ್ಯೆಯಿಂದ ಒಂದು ಕಾಲನ್ನು ಕಳೆದುಕೊಂಡಿದ್ದರು.ಈ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಂದ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್, ಯುವಕನಿಗೆ ಕೃತಕ ಕಾಲನ್ನು ಹಾಕಿಸುವುದರ ಮೂಲಕ ಅವರ ಜೀವನಕ್ಕೆ ನೆರವಾಗಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಸದಾ ಬಡವರ ಪರ ಧ್ವನಿ ಎತ್ತುವ ನಮ್ಮ ಬಿವಿ ಶ್ರೀನಿವಾಸ್ ರವರು ನಮ್ಮ ಹೆಮ್ಮೆ ಎಂದು ಅವರ ಈ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.