Home ಬ್ರೇಕಿಂಗ್ ಸುದ್ದಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ  ಕಾರಿನ ಮೇಲೆ ಮೊಟ್ಟೆ ಎಸೆತ : ಬಿಜೆಪಿ ಕಾರ್ಯಕರ್ತರಿಂದ ಧಿಕ್ಕಾರ ಘೋಷಣೆ

ಮಡಿಕೇರಿಯಲ್ಲಿ ಸಿದ್ದರಾಮಯ್ಯ  ಕಾರಿನ ಮೇಲೆ ಮೊಟ್ಟೆ ಎಸೆತ : ಬಿಜೆಪಿ ಕಾರ್ಯಕರ್ತರಿಂದ ಧಿಕ್ಕಾರ ಘೋಷಣೆ

0

ಮಡಿಕೇರಿ: ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಬಂದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನವರ ಕಾರಿಗೆ  ಕೋಳಿಮೊಟ್ಟೆ ಎಸೆಯಲು ಹಿಂದೂತ್ವ ಕಾರ್ಯಕರ್ತರು ಯತ್ನಿಸಿದ ಘಟನೆ  ಮಡಿಕೇರಿಯಲ್ಲಿ ನಡೆದಿದೆ. ಅವರು ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ವೃತ್ತದ ಇನ್ನೊಂದು ಬದಿಯಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಅಯ್ಯಪ್ಪ ಪ್ರತಿಭಟನಾಕಾರರ ಮನವೊಲಿಸಿ ಹಿಂದೆ ಕಳಿಸಿದರು.

ಅತಿ ಮಳೆಯಿಂದಾಗಿ ಹಾನಿಗೊಳಗಾದ ಕೊಡಗಿನ ಮದೆನಾಡು, ಕೊಯನಾಡು ಪ್ರದೇಶಗಳಿಗೆ  ಸಿದ್ಧರಾಮಯ್ಯನವರು ಭೇಟಿ ನೀಡಲು ಬಂದಿದ್ದರು.

ಮೊದಲಿಗೆ  ತಿತಿಮತಿ ಬಳಿ  ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್‌ ಹಾಕಿದ್ದರು.ಗೋ ಬ್ಯಾಕ್‌ ಸಿದ್ಧರಾಮಯ್ಯ ಘೋಷಣೆ ಕೂಗಿದ್ದರು

You cannot copy content of this page

Exit mobile version