Home ರಾಜಕೀಯ ʼಮಹಾರಾಣಾ ಪ್ರತಾಪ್‌ ಹೆಸರು ತೆಗೆದು ರಜಪೂತ ಯುವಕರನ್ನು ಕೆರಳಿಸಿದ್ದಾರೆʼ: ಕಪಿಲ್‌ ಮಿಶ್ರಾ ವಾಗ್ದಾಳಿ

ʼಮಹಾರಾಣಾ ಪ್ರತಾಪ್‌ ಹೆಸರು ತೆಗೆದು ರಜಪೂತ ಯುವಕರನ್ನು ಕೆರಳಿಸಿದ್ದಾರೆʼ: ಕಪಿಲ್‌ ಮಿಶ್ರಾ ವಾಗ್ದಾಳಿ

0

ದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿರುವಾಗ ಮಹಾರಾಣಾ ಪ್ರತಾಪ್‌ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ.

ʼಸಿಸೋಡಿಯಾ ಮತ್ತು ಕೇಜ್ರಿವಾಲ್‌ ಅವರು ತಮ್ಮ ಬಿಕ್ಕಟ್ಟಿನ ಕ್ಷಣದಲ್ಲಿ ಮಹಾರಾಣ ಪ್ರತಾಪ್‌ ಅವರನ್ನು ಕರೆಯುವ ಮೂಲಕ ರಜಪೂತ ಯುವಕರನ್ನು ಕೆರಳಿಸಿದ್ದಾರೆ, ಆದರೆ ಅವರು ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ಅವರ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದಾರೆʼ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

You cannot copy content of this page

Exit mobile version