Thursday, August 21, 2025

ಸತ್ಯ | ನ್ಯಾಯ |ಧರ್ಮ

ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ʼಜೈಲರ್‌ʼ ಖ್ಯಾತಿಯ ನಟ ವಿನಾಯಕನ್ ಬಂಧನ

ಹೈದರಾಬಾದ್: ಮಲಯಾಳಂ ನಟ ವಿನಾಯಕನ್ ಅವರನ್ನು ಸಿಐಎಸ್ಎಫ್ ಪೊಲೀಸರು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಳೆದ ವರ್ಷ, ವಿನಾಯಕನ್ ಕುಡಿದ ಅಮಲಿನಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು.

ಸಂತ್ರಸ್ತ ಕಾನ್‌ಸ್ಟೆಬಲ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶನಿವಾರ ರಾತ್ರಿ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದ್ದಾರೆ.

ಆರ್‌ಜಿಐ ಏರ್‌ಪೋರ್ಟ್ ಪೊಲೀಸರು ಈ ಕುರಿತು ವಿನಾಯಕ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ವಿನಾಯಕನ್ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಈಗಾಗಲೇ ಹಲವು ಬಾರಿ ಹೇಳಿದ್ದಾರೆ.

ಸಿಐಎಸ್‌ಎಫ್ ಅಧಿಕಾರಿಗಳು ತನ್ನನ್ನು ವಿಮಾನ ನಿಲ್ದಾಣದ ಕೊಠಡಿಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ವಿನಾಯಕನ್ ಆರೋಪಿಸಿದ್ದಾರೆ. ಅಗತ್ಯವಿದ್ದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆಯೂ ಅವರು ಹೇಳಿದರು.

ವಿನಾಯಕನ್‌ ಕಮ್ಮಾಟಿಪಡಂ ಎನ್ನುವ ಮಲಯಾಳಂ ಚಿತ್ರ ಹಾಗೂ ಇತ್ತೀಚಿನ ರಜನೀಕಾಂತ್‌ ನಾಯಕತ್ವದ ಜೈಲರ್‌ ಚಿತ್ರದ ಪಾತ್ರದಿಂದ ಬಹಳಷ್ಟು ಖ್ಯಾತಿಯನ್ನು ಪಡೆದಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page