Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಳೆ ಹಾನಿ ಸ್ಥಳಗಳಿಗೆ ಸಿಎಂ ಬೇಟಿ ಕುರಿತು ರಾಜ್ಯ ಕಾಂಗ್ರೆಸ್‌ ಟೀಕೆ

ಬೆಂಗಳೂರು: ನಗರದಲ್ಲಿ  ಮೂರುದಿನಗಳಿಂದ  ಧಾರಾಕಾರ ಮಳೆ ಸುರಿಯುತ್ತಿದ್ದು, ನಗರದಲ್ಲಿನ ಅನೇಕ ಸ್ಥಳಗಳು ಜಲಾವೃತಗೊಂಡು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಈ ಕಾರಣ ಮಳೆ ಹಾನಿ ಸ್ಥಳಗಳ ವೀಕ್ಷಣೆಗೆ ಹೊರಟಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡುವ ಮೂಲಕ ಟೀಕಿಸಿದೆ.

ಮಳೆಯಿಂದ ಬೆಂಗಳೂರು ನಗರ ಮುಳುಗಿ ಮೂರು ದಿನ ಕಳೆದ ಮೇಲೆ ಮಳೆ ಹಾನಿ ಪ್ರದೇಶದ ವೀಕ್ಷಣೆಗೆ ಹೋಗುತ್ತಿರುವ ಬೊಮ್ಮಯಿ ಅವರೇ, ಬೋಟ್‌ನಲ್ಲಿ ಹೋಗ್ತಿದೀರಾ, ಡ್ರೋನ್‌ನಲ್ಲಿ ನೋಡ್ತಿದೀರಾ!? ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಬೆಂಗಳೂರು ಮುಳುಗಿ 3 ದಿನ ಕಳೆದ ಮೇಲೆ ಹಾನಿ ವೀಕ್ಷಿಸಲು ಮುಂದಾದ ಮುಖ್ಯಮಂತ್ರಿಗಳೇ. ನೀವು ಎಚ್ಚರವಾಗಲು ಕಾಂಗ್ರೆಸ್ ಪಕ್ಷ ಧ್ವನಿ ಎತ್ತಬೇಕಾಯ್ತೆ? ಸ್ವಯಂಪ್ರೇರಣೆಯ ಕಾಳಜಿ ನಿಮಗೆ ಇಲ್ಲವಾಯ್ತೆ? ಪರಿಹಾರ ಕ್ರಮಗಳಲ್ಲಿ 50% ಕಮಿಷನ್ ಅಡ್ಜಸ್ಟ್‌ಮೆಂಟ್‌ಗೆ ಈ ವೀಕ್ಷಣೆ ನಾಟಕವೇ? ಅಥವಾ 50% ಕಮಿಷನ್ನಿನ ಪ್ರತಿಫಲವನ್ನು ವೀಕ್ಷಿಸಲೇ? ಎಂದು ಟೀಕಿಸಿದೆ.

ಕಾಂಗ್ರೆಸ್ ಚಾಟಿ ಬೀಸಿದ ಮೇಲೆ ಸಿಎಂಗೆ ಮಳೆ ಹಾನಿ ವೀಕ್ಷಿಸಲು ಜ್ಞಾನೋದಯವಾಗಿದೆ. ಜನರ ಸಂಕಷ್ಟದ ಬದಲು ಯಾವುದಾದರೂ ಸಿನಿಮಾ ಪ್ರದರ್ಶನ ಇದ್ದಿದ್ದರೆ ತಕ್ಷಣ ಹೋಗಿರುತ್ತಿದ್ದರು ಎಂದು ರಾಜ್ಯ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು