Friday, June 20, 2025

ಸತ್ಯ | ನ್ಯಾಯ |ಧರ್ಮ

ಮಳೆಯಿಂದ ನಲುಗಿದ ಜನ : ಸಂತ್ರಸ್ಥರಿಗೆ ಪರಿಹಾರಕ್ಕಾಗಿ ಒತ್ತಾಯಿಸಿದ AAP

ಬೆಂಗಳೂರು : ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರ ಸೇರಿದಂತೆ ಹಲವಾರು ಭಾಗಗಳಲ್ಲಿ  ಕಳೆದೆರಡು ದಿವಸಗಳಿಂದ  ಸತತ ಮಳೆ ಹಾನಿಯಿಂದಾಗಿ  ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದ್ದು ಸರ್ಕಾರ ಕೂಡಲೇ  ಪರಿಹಾರವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅಲ್ಲಿನ ಶಾಸಕರಿಗೆ ಒತ್ತಾಯಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಬೆಂಗಳೂರಿನ ಜನರ ಜೀವನ ಅಸ್ಥವ್ಯಸ್ಥವಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರಗಳಲ್ಲಿ ಮಳೆ ನೀರು ಮನೆಗಳಿಗಿಗೆ ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳ ಸಮೇತ ಕೊಚ್ಚಿಹೋಗಿವೆ.

ಈ ಹಿನ್ನಲೆಯಲ್ಲಿ ಮಳೆಯಲ್ಲಿ ಹಾನಿಯುಂಟಾಗಿ ಆತಂಕದಲ್ಲಿರುವ ಸಂತ್ರಸ್ಥರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದು,, ಇಂದು AAP ಯ ಪ್ರಕಾಶ್ ನೆಡುಂಗಡಿ, ಕುದರತ್ ಇನ್ನಿತರರು  ಸೇರಿ ಶಾಸಕ ರಿಜ್ವಾನ್ ಹರ್ಷದ್ ರನ್ನು ಭೇಟಿ ಮಾಡಿ ಈ ಸಂತ್ರಸ್ಥರ ಸಲುವಾಗಿ ಮಾತನಾಡಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page