Thursday, June 19, 2025

ಸತ್ಯ | ನ್ಯಾಯ |ಧರ್ಮ

ಗಾಂಜಾ ಸೇವನೆ: 6 ವರ್ಷದ ಮಗುವನ್ನು ಕೊಂದ ಬಾಲಕರು

ನವದೆಹಲಿ:  ದಕ್ಷಿಣ ದೆಹಲಿಯ ಕಟ್ಟದ ನಿರ್ಮಾಣ ಸ್ಥಳದಲ್ಲಿ ಇಬ್ಬರು ಬಾಲಕರು ಆರು ವರ್ಷದ ಮಗುವನ್ನು ಕೊಂದಿದರುವ ಘಟನೆ ಬೆಳಕಿಗೆ ಬಂದಿದ್ದು, ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ .

ರಾತ್ರಿ ಊಟದ ನಂತರ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಭಜನೆ ನಡೆಯುತ್ತಿದ್ದು, ಭಜನೆ ನಡೆಯುತ್ತಿರುವ ಸ್ಥಳಕ್ಕೆ ಮಗುವಿನ ಪೋಷಕರು ಹೋಗಿದ್ದರು. ನಂತರ ಭಜನೆ ಹಾಡುತ್ತಿರುವಾಗ ತಮ್ಮ ಮಗ ನಾಪತ್ತೆಯಾಗಿರುವುದು ತಿಳಿದುಬಂದಿದ್ದು, ಕೂಡಲೇ ಪೋಷಕರು ಅಲ್ಲಿಂದ ತೆರಳಿ ಸಮೀಪದಲ್ಲಿರುವ ಸ್ಲಮ್‌ಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗುಡಿಸಲೊಂದರ ಮುಂದೆ  ರಕ್ತ ಕಂಡುಬಂದಿದ್ದು, ಬಾಗಿಲು ತೆರೆದು ನೋಡಿದಾಗ ಇಬ್ಬರು ಬಾಲಕರು  ಮಗುವನ್ನು ಕೊಂದಿರುವುದು ಕಂಡುಬಂದಿದೆ.

ನಂತರ ಕೊಲೆಯಾದ ಮಗುವಿನ ಶವವನ್ನು ಹಿಡಿದುಕೊಂಡು ಪೋಷಕರು ಅಳುತ್ತಿದ್ದನ್ನು ಕಂಡು ಪೊಲೀಸರು ಸ್ಥಳಕ್ಕೆ ದಾವಿಸಿದ್ದಾರೆ. ನಂತರ ಪೊಲೀಸರು ಫೋರೆನಿಕ್ಸ್‌ ತಂಡವನ್ನು ಕರೆಸಿ ಇಬ್ಬರು ಬಾಲಕರು ಕೊಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಮಾಹಿತಿ ಪ್ರಕಾರ, ಮಗುವನ್ನು ಕೊಲ್ಲುವ ಮೊದಲು ಆ ಇಬ್ಬರು ಬಾಲಕರು ಗಾಂಜಾ ಸೇವಿಸಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರು ಆರೋಪಿಗಳು ಭಗವಾನ್‌ ಶಿವನ ಪ್ರಸಾದವನ್ನು ಸೇವಿಸಿದ ನಂತರ, ಮಹಿಳೆಯರು ಭಜನೆಗಳನ್ನು ಹಾಡುತ್ತಿದ್ದ ಸ್ಥಳಕ್ಕೆ ಹೋಗಿ ಅಗರಬತ್ತಿಗಳನ್ನು ಕೇಳಿದ್ದು, ಆದಕ್ಕೆ ಮಹಿಳೆಯರು ನಿರಾಕರಿಸಿದ್ದಾರೆ. ನಂತರ ಇಬ್ಬರು ಆರೋಪಿಗಳು ತಮ್ಮ ಗುಡಿಸಲುಗಳಿಗೆ ಮರಳುತ್ತಿರುವಾಗ ಶಿವನು ಮಗುವಿನ ಬಲಿ ಕೇಳುತ್ತಿದ್ದಾನೆ ಎಂದು ಭಾವಿಸಿ ಮಗುವನ್ನು ಹುಡುಕಿ ತಾವು ಇರುವ ಗುಡಿಸಲಿನ ಒಳಗೆ ಕರೆದೊಯ್ದು ಮಗುವನ್ನು ಚಾಕುವಿನಿಂದ ಸೀಳಿ ಕೊಲೆಮಾಡಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page