Home ಲೋಕಸಭೆ ಚುನಾವಣೆ -2024 ನಾಲ್ಕನೇ ಹಂತದ ಚುನಾವಣೆ: ಮೋದಿ ಭಾಷಣದ ತುಂಬೆಲ್ಲ ಬರೀ ಮುಸ್ಲಿಂ ದ್ವೇಷ

ನಾಲ್ಕನೇ ಹಂತದ ಚುನಾವಣೆ: ಮೋದಿ ಭಾಷಣದ ತುಂಬೆಲ್ಲ ಬರೀ ಮುಸ್ಲಿಂ ದ್ವೇಷ

0

ಕೋಲ್ಕತ್ತಾ: ಸಾರ್ವತ್ರಿಕ ಚುನಾವಣೆ ಆರಂಭವಾದಾಗಿನಿಂದಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷದ ಕಿಚ್ಚು ಹಚ್ಚುತ್ತಿರುವ ಬಿಜೆಪಿ ನಾಯಕರು ನಾಲ್ಕನೇ ಹಂತದ ಮತದಾನದ ಹೊಸ್ತಿಲಲ್ಲಿ ಮತ್ತಷ್ಟು ವಿಷ ಕಾರುತ್ತಿದ್ದಾರೆ.

ಪಶ್ಚಿಮ ಬಂಗಾಳದ ಬರಕ್‌ಪುರ ಮತ್ತು ಹೂಗ್ಲಿ ಪ್ರದೇಶಗಳಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಧಾರ್ಮಿಕ ಪ್ರಚೋಧನೆಯಿಂದ ಕೂಡಿದ್ದವು. ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗುವುದು ಎಂದು ಪುನರುಚ್ಚರಿಸಿದರು.
ಮೋದಿ ಬದುಕಿರುವಾಗ ಸಿಎಎ ರದ್ದುಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಸವಾಲು ಎಸೆದರು.

ಕೆಲವು ಪ್ರದೇಶಗಳಲ್ಲಿ ದಲಿತರು ಮತ್ತು ಆದಿವಾಸಿಗಳಿಗಿಂತ ಮುಸ್ಲಿಮರು ಹಿಂದುಳಿದಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಶ್ರಮಿಸುತ್ತಿವೆ. ಇದಕ್ಕೆ ಬಿಜೆಪಿ ಸಂಪೂರ್ಣ ವಿರೋಧವಿದೆ ಎಂದು ಮೋದಿ ಮತ್ತೆ ಪುನರುಚ್ಚರಿಸಿದರು.

ಮತ್ತೊಂದೆಡೆ, ಹಿಂದೂ ಮತದಾರರನ್ನು ಒಗ್ಗೂಡಿಸಲು ಬಂಗಾಳಕ್ಕೆ ಭೇಟಿ ನೀಡಿದ ಮೋದಿ ರಾಮಜಪವನ್ನು ಜಪಿಸಿದರು. ಧರ್ಮದ ಆಧಾರದ ಮೇಲೆ ಯಾರೂ ಮೀಸಲಾತಿ ನೀಡಲು ಸಾಧ್ಯವಿಲ್ಲ. SC, ST, OBC ಮೀಸಲಾತಿಯನ್ನು ಯಾರೂ ಮುಟ್ಟುವಂತಿಲ್ಲ. ಶ್ರೀರಾಮನವನಿ ಆಚರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪು ರದ್ದಾಗುವುದಿಲ್ಲ. “ಸಿಎಎ ಅನುಷ್ಠಾನವನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಘೋಷಿಸಿದರು.

ಮೋದಿಯವರ ಭಾಷಣವು ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವಂತೆ ಮಾಡಿತು. ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ಪೌರತ್ವಕ್ಕೆ ಧರ್ಮದ ಬಣ್ಣ ತಂದಿರುವ ಸಿಎಎ ರದ್ದುಗೊಳಿಸಬೇಕು ಎಂದು ಪ್ರತಿಪಕ್ಷಗಳ ಐಕ್ಯ ವೇದಿಕೆಯಲ್ಲಿ ಹಲವು ಪಕ್ಷಗಳು ಒತ್ತಾಯಿಸುತ್ತಿರುವುದು ಗೊತ್ತೇ ಇದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈಗಾಗಲೇ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಬಂಗಾಳದಲ್ಲಿ ಸಿಎಎ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಎ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಘೋಷಿಸಿರುವುದು ಗಮನಾರ್ಹ.

ತೃಣಮೂಲ ಕ್ರಿಮಿನಲ್‌ಗಳ ಅಡ್ಡೆಯಾಗಿದೆ

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗೂಂಡಾಗಳನ್ನು ಮಮತಾ ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು. ತೃಣಮೂಲ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಮಹಿಳೆಯರಿಗೆ ಆಡಳಿತ ಪಕ್ಷ ಬೆದರಿಕೆ ಹಾಕುತ್ತಿದೆ ಮತ್ತು ಅವರ ದೂರುಗಳನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ತೃಣಮೂಲ ಆಡಳಿತದಲ್ಲಿ ಬಂಗಾಳದ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ ಎಂದು ಅವರು ಧಾರ್ಮಿಕವಾಗಿ ಪ್ರೇರಿತ ಟೀಕೆಗಳನ್ನು ಮಾಡಿದರು. ಈ ಅವಧಿಯಲ್ಲಿ ‘ರಾಜಕುಮಾರ’ ರಾಹುಲ್ ಗಾಂಧಿಯವರ ವಯಸ್ಸಿಗಿಂತ (53) ಕಡಿಮೆ ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಮೋದಿ ಭವಿಷ್ಯ ನುಡಿದಿದ್ದಾರೆ.

You cannot copy content of this page

Exit mobile version