ಹೊಸದಿಲ್ಲಿ: ವಿಪಕ್ಷಗಳ ನಾಯಕರು ಪವಿತ್ರ ಸಾವನ್ (ಶ್ರಾವಣ) ಮಾಸದಲ್ಲಿ ಮಾಂಸಾಹಾರ ಸೇವಿಸಿ ಹಿಂದೂಗಳ ಭಾವನೆಗಳಿಗೆ ಅಗೌರವ ತೋರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮೋದಿಯವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧವ್ಯಕ್ತವಾಗಿದೆ. ನಾವು ತಿನ್ನು ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕೊಡಿ ಪ್ರಧಾನಿಯವರೇ. ಅದರಲ್ಲೂ ಮೂಗು ತೂರಿಸಬೇಡಿ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಉಧಂಪುರದಲ್ಲಿ ಚುನಾವಣಾ ಪ್ರಚಾರದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ವಿಪಕ್ಷ ನಾಯಕರು ಮಾಂಸಾಹಾರ ಸೇವಿಸುತ್ತಿರುವ ವೈರಲ್ ವೀಡಿಯೋ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ನೀವು ಯಾರನ್ನು ಅಣಕಿಸಲು ಬಯಸುತ್ತೀರಿ? ನವರಾತ್ರಿಯ ಈ ದಿನಗಳಲ್ಲಿ ಮಾಂಸಾಹಾರ ಸೇವಿಸಿ, ಜನರಿಗೆ ವೀಡಿಯೋ ತೋರಿಸಿ ಅವರ ಭಾವನೆಗಳನ್ನು ನೋವುಂಟು ಮಾಡುವುದು ಸರಿಯೇ. ಜನರು ಮತದಾನ ಮಾಡುವಾಗ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದರು.
ಈ ಆಟವಾಡಿ ನೀವು ಯಾರನ್ನು ಓಲೈಸಲು ಯತ್ನಿಸುತ್ತಿದ್ದೀರಿ? “ಈ ದೇಶದ ನಂಬಿಕೆಗಳ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸಲು,” ಜನರು ಮಾಂಸಾಹಾರ ಸೇವಿಸುತ್ತಿರುವ ವೀಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ, ಎಂದು ಅವರು ಆರೋಪಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್ಜೆಡಿ ನಾಯಕ ಲಾಲು ಯಾದವ್ ಅವರು ಜೊತೆಯಾಗಿ ಮಟನ್ ಖಾದ್ಯ ತಯಾರಿಸುತ್ತಿರುವುದನ್ನು ತೋರಿಸುವ ಸೆಪ್ಟೆಂಬರ್ 2023ರ ವೀಡಿಯೋ ಒಂದು ವೈರಲ್ ಆಗಿತ್ತು.
ಆದರೆ ಪ್ರಧಾನಿಯ ಹೇಳಿಕೆಗೆ ಹಲವರು ಆಕ್ಷೇಪಿದ್ದು ಆಹಾರ ಆಯ್ಕೆಗಳ ವಿಚಾರ ಮುಂದಿಟ್ಟುಕೊಂಡು ಜನರ ನಡುವೆ ಒಡಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಚಿಕನ್ ತಿನ್ನಲು ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ ದೇಸಾಯಿ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳುತ್ತಿರುವ ವೀಡಿಯೋವನ್ನು ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅದು ಕೂಡ ಈ ಸಂದರ್ಧದಲ್ಲಿ ವೈರಲ್ ಆಗಿದೆ.
?