Saturday, June 22, 2024

ಸತ್ಯ | ನ್ಯಾಯ |ಧರ್ಮ

ಮಾರಲ್ ಪೊಲೀಸಿಂಗ್: ಹಿಂದೂ ಹುಡುಗಿಯ ಜೊತೆಯಲ್ಲಿದ್ದ ಇಬ್ಬರು ಮುಸ್ಲಿಂ ಹುಡುಗರ ವಿಚಾರಣೆ

ಬಂಟ್ವಾಳ: ಸಿದ್ದರಾಮಯ್ಯ ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆ ಮತ್ತು ವಿಶೇಷ ವಿಭಾಗ ಸ್ಥಾಪನೆಯ ನಡುವೆಯೂ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಂಗಳೂರು ನಗರ ಸಮೀಪದ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಗುರುವಾರ ಈ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಹಿಂದೂ ಹುಡುಗಿಯ ಜೊತೆ ನಿಂತಿದ್ದ ಇಬ್ಬರು ಮುಸ್ಲಿಂ ಹುಡುಗರನ್ನು ಸ್ಥಳೀಯ ಗುಂಪು ಪ್ರಶ್ನಿಸಿತ್ತು.

ಸ್ಥಳೀಯ ಯುವಕರು ಗುಂಪನ್ನು ಗಮನಿಸಿ ಹುಡುಗರ ಚಲನವಲನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರು ಕುದ್ದುಪದವು ಕಡೆಯಿಂದ ಬಸ್‌ನಲ್ಲಿ ಬಂದು ಕೇರಳದ ಕಾಸರಗೋಡಿನ ಉಪ್ಪಳಕ್ಕೆ ತೆರಳಲು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಅವರನ್ನು ಪ್ರಶ್ನಿಸುತ್ತ ಅದರ ವಿಡಿಯೋ ತೆಗೆದಿದ್ದಾರೆ. ಹುಡುಗರು ತಾವು ವಿದ್ಯಾರ್ಥಿಗಳು ಮತ್ತು ಪರಸ್ಪರ ಪರಿಚಯವಿದೆ ಎಂದು ಹೇಳಿಕೊಂಡರೂ ಬಿಡದೆ ಪೊಲೀಸರಿಗೆ ಮಾಹಿತಿ ನೀಡಿದರು. ವಿಟ್ಲ ಠಾಣೆ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಪ್ರಾಥಮಿಕ ವಿಚಾರಣೆ ಬಳಿಕ ಬಿಡುಗಡೆಗೊಳಿಸಿದರು. ತಾವು ಕಾಸರಗೋಡು ಜಿಲ್ಲೆಯ ಪೆರ್ಲ ನಿವಾಸಿಗಳೆಂದು ಹುಡುಗರು ಪೊಲೀಸರಿಗೆ ತಿಳಿಸಿದ್ದಾರೆ.

ಈ ನಡುವೆ ಬಾಲಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು.

Related Articles

ಇತ್ತೀಚಿನ ಸುದ್ದಿಗಳು