Friday, June 20, 2025

ಸತ್ಯ | ನ್ಯಾಯ |ಧರ್ಮ

ಐಸಿಸ್ ನಂಟಿನ ಆರೋಪ ಹೊತ್ತ ಮಾಜ್ ಮುನೀರ್ ತಂದೆ ಮುನೀರ್ ಅಹಮದ್ ನಿಧನ

ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದ ಅಡಿಯಲ್ಲಿ ಬಂಧಿತನಾಗಿರುವ ಯುವಕ ಮಾಜ್ ಮುನೀರ್ ತಂದೆ ಮುನೀರ್ ಅಹಮದ್ ಇಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ತನ್ನ ಮಗನ ಬಂಧನದ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದ ಮುನೀರ್ ಅಹಮದ್ ರವರು ಇಂದು ಸಂಜೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ತೀರ್ಥಹಳ್ಳಿ ಮೂಲದ ಮುನೀರ್ ಅಹಮದ್ ರವರು ಕಳೆದ 2 ವರ್ಷಗಳ ಹಿಂದೆ ಮಕ್ಕಳ ವಿಧ್ಯಾಭ್ಯಾಸ ಮತ್ತು ಉದ್ಯೋಗದ ಕಾರಣಕ್ಕೆ ಮಂಗಳೂರಿನಲ್ಲಿ ನೆಲೆಸಿದ್ದರು. ತೀರ್ಥಹಳ್ಳಿಯ ಮಾರ್ಕೆಟ್ ವ್ಯಾಪ್ತಿಯಲ್ಲಿ ಬರುವ ಸೊಪ್ಪುಗುಡ್ಡೆಯಲ್ಲಿ ಸ್ವಂತ ಮನೆ ಇದ್ದರೂ ಅದನ್ನು ಬಾಡಿಗೆಗೆ ಕೊಟ್ಟು ಮಂಗಳೂರಿನಲ್ಲಿ ನೆಲೆಸಿದ್ದರು.

ಮೃತ ಮುನೀರ್ ಅಹಮದ್ ಅವರು ಮಾಜಿ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡರಾದ ಸಬ್ಜಾನ್ ಸಾಹೇಬರ ಪುತ್ರನಾಗಿದ್ದರು. ಈ ಹಿನ್ನೆಲೆಯಲ್ಲಿ ಮೃತ ಮುನೀರ್ ಅಹಮದ್ ಮೃತದೇಹವನ್ನು ತೀರ್ಥಹಳ್ಳಿಗೆ ತರಲಾಗುತ್ತಿದೆ. ಮತ್ತು ನಾಳೆ 12 ಗಂಟೆಗೆ ಅಂತ್ಯಸಂಸ್ಕಾರ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಎರಡು ವರ್ಷಗಳ ಹಿಂದೆ ಉಗ್ರ ಸಂಘಟನೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೋಡೆ ಬರಹ ಬರೆದ ಆರೋಪದಲ್ಲಿ ಮಗ ಮಾಜ್ ಮುನೀರ್ ನನ್ನು ಬಂಧಿಸಿದಾಗಲೂ ತೀವ್ರ ಖಿನ್ನತೆಗೆ ಒಳಗಾಗಿದ್ದ ತಂದೆ ಮುನೀರ್ ಅಹಮದ್ ರವರು ಅಂದೇ ಆಸ್ಪತ್ರೆಗೆ ದಾಖಲಾಗಿ ಹೃದಯಕ್ಕೆ ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಸಧ್ಯ ಈಗಲೂ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಮಗನನ್ನು ಬಂಧಿಸಿದ ನಂತರ ಮತ್ತೆ ಹೃದಯಾಘಾತವಾಗಿ ಸಂಜೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page