Home ದೇಶ ಬಂಗಾಳದ ದುಸ್ಥಿತಿ ನೋಡಿ ನನ್ನ ಹೃದಯ ಮರುಗುತ್ತಿದೆ!: ಪ್ರಧಾನಿ ಮೋದಿ

ಬಂಗಾಳದ ದುಸ್ಥಿತಿ ನೋಡಿ ನನ್ನ ಹೃದಯ ಮರುಗುತ್ತಿದೆ!: ಪ್ರಧಾನಿ ಮೋದಿ

0

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಅಸಮರ್ಥ ಆಡಳಿತ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. “ಅವರ ಆಡಳಿತದಲ್ಲಿ ಬಂಗಾಳದ ಸ್ಥಿತಿಯನ್ನು ನೋಡಿ ನನ್ನ ಹೃದಯ ಒಡೆದುಹೋಗಿದೆ. ರಾಜ್ಯದ ಜನರಿಗೆ ಮಮತಾ ಅವರು ಎಲ್ಲಾ ರೀತಿಯಿಂದಲೂ ತೀವ್ರ ಅನ್ಯಾಯ ಮಾಡುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ. “ರಾಜ್ಯಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ನಾನು ಸರಿಪಡಿಸುತ್ತೇನೆ ಮತ್ತು ‘ವಿಕಸಿತ ಪಶ್ಚಿಮ ಬಂಗಾಳ’ವನ್ನಾಗಿ ಮಾಡುತ್ತೇನೆ,” ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

ಬಂಗಾಳದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಬಂಗಾಳದ ಮತದಾರರನ್ನು ಉದ್ದೇಶಿಸಿ ಅವರು ಸೋಮವಾರ ಬಂಗಾಳಿ ಭಾಷೆಯಲ್ಲಿ ಬಹಿರಂಗ ಪತ್ರ ಬರೆದಿದ್ದು, ಅದನ್ನು ‘ಜೈ ಮಾ ಕಾಳಿ’ ಎಂದು ಆರಂಭಿಸಿದ್ದಾರೆ. “ಬಂಗಾಳದಲ್ಲಿ ಬದಲಾವಣೆ ಖಚಿತ. ಬಂಗಾಳದ ಜನರು ವಿವೇಚನೆಯಿಂದ ಮತ ಹಾಕುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದು ಹೇಳಿದ್ದಾರೆ.

ಅಕ್ರಮಗಳಿಗೆ ತಡೆ ಹಾಕುತ್ತೇವ

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬಂಗಾಳವು ಇಡೀ ದೇಶಕ್ಕೇ ದಾರಿದೀಪವಾಗಿತ್ತು ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಟ್ಯಾಗೋರ್ ಅವರಂತಹ ಮಹಾನ್ ವ್ಯಕ್ತಿಗಳನ್ನು ನೀಡಿದ ಈ ರಾಜ್ಯದ ಇಂದಿನ ಸ್ಥಿತಿ ನೋಡಿ ನೋವಾಗುತ್ತಿದೆ ಎಂದಿದ್ದಾರೆ.

ಮೋದಿ ಪತ್ರದ ಮುಖ್ಯಾಂಶಗಳು:

  • ಅಸಮರ್ಥ ಆಡಳಿತ: ಕಳೆದ 60 ವರ್ಷಗಳಿಂದ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸುತ್ತಿದೆ. ಮಮತಾ ಸರ್ಕಾರ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ನುಸುಳುವಿಕೆಗೆ ಅವಕಾಶ ನೀಡುತ್ತಿದೆ.
  • ನಿರುದ್ಯೋಗ: ಟ್ಯಾಗೋರ್ ಅವರು ‘ಸೋನಾರ್ ಬಾಂಗ್ಲಾ’ ಎಂದು ಹೊಗಳಿದ ಈ ನಾಡಿನಲ್ಲಿ ಇಂದು ನಕಲಿ ಮತದಾರರು ಹೆಚ್ಚಾಗಿದ್ದಾರೆ. ಉದ್ಯೋಗವಿಲ್ಲದೆ ಯುವಕರು ವಲಸೆ ಹೋಗುತ್ತಿದ್ದಾರೆ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.
  • ಅಭಿವೃದ್ಧಿಯ ಆಶ್ವಾಸನೆ: ಆಯುಷ್ಮಾನ್ ಭಾರತ್ ಅಂತಹ ಯೋಜನೆಗಳಿಂದ ಇಡೀ ದೇಶ ಪ್ರಗತಿ ಹೊಂದುತ್ತಿದೆ, ಬಂಗಾಳವೂ ಇದರ ಭಾಗವಾಗಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ಕಿತ್ತೊಗೆಯುತ್ತೇವೆ ಮತ್ತು ಸಿಎಎ (CAA) ಮೂಲಕ ಅರ್ಹ ನಿರಾಶ್ರಿತರಿಗೆ ಪೌರತ್ವ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್ ತಿರುಗೇಟು

ಮೋದಿ ಅವರ ಪತ್ರದ ಬಗ್ಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ತೀವ್ರವಾಗಿ ಪ್ರತಿಕ್ರಿಯಿಸಿದೆ. ಇದನ್ನು “ಚುನಾವಣಾ ಗಿಮಿಕ್” ಎಂದು ಕರೆದಿರುವ ಪಕ್ಷದ ವಕ್ತಾರ ಕುನಾಲ್ ಘೋಷ್, “ಬಂಗಾಳದ ಮೇಲೆ ಇಷ್ಟೊಂದು ಪ್ರೀತಿ ಇರುವ ಮೋದಿ, ಕೇಂದ್ರದಿಂದ ಬರಬೇಕಾದ ₹1.96 ಲಕ್ಷ ಕೋಟಿ ಬಾಕಿ ಹಣವನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಇದನ್ನು ಕೇವಲ ಮತಗಳಿಗಾಗಿ ಮಾಡುತ್ತಿರುವ ನಾಟಕ ಎಂದು ಟೀಕಿಸಿದ್ದಾರೆ.

You cannot copy content of this page

Exit mobile version