Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಪ್ರಶಸ್ತಿಯಲ್ಲಿ ಜೈಭೀಮ್‌, ಸಾರ್ಪಟ್ಟ ಪರಂಪರೈ, ಕರ್ಣನ್‌ ಸಿನೆಮಾಗಳ ನಿರ್ಲಕ್ಷ್ಯ: ತಮಿಳು ಪ್ರೇಕ್ಷಕರು ಗರಂ

ಕೇಂದ್ರ ಸರ್ಕಾರ ನಿನ್ನೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. RRR ಮತ್ತು ಅಲ್ಲು ಅರ್ಜುನ್ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಾಯಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ನಡುವೆ ತಮಿಳಿನ ಕೆಲವು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಸಮಿತಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಅವುಗಳಿಗೆ ಮಾಡಿರುವ ಅನ್ಯಾಯದಂತಿದೆ

ತೆಲುಗು ಚಿತ್ರರಂಗ ರಾಷ್ಟ್ರ ಪ್ರಶಸ್ತಿ ಪಡೆಯುವ ಸಂಭವನೀಯತೆಯಲ್ಲಿಯೂ ಇಲ್ಲದ ಜಾಗದಿಂದ ಈಗ ಒಂದೇ ವರ್ಷದಲ್ಲಿ ಹತ್ತು ರಾಷ್ಟ್ರಪ್ರಶಸ್ತಿಗಳನ್ನು ಗೆಲ್ಲುವ ಮಟ್ಟಕ್ಕೆ ಬೆಳೆದಿದೆ. ಏತನ್ಮಧ್ಯೆ ರಾಷ್ಟ್ರಪ್ರಶಸ್ತಿ ಘೋಷಣೆಯಾದಾಗಿನಿಂದಲೂ ಕಾಲಿವುಡ್ ನಲ್ಲಿ ನಮ್ಮ ಚಿತ್ರಗಳಿಗೆ ಅನ್ಯಾಯವಾಗುತ್ತಿದ್ದು, ಈ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂಬ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಆ ಸಿನಿಮಾಗಳಿಗೆ ಪ್ರಶಸ್ತಿ ಬಂದರೆ ಚೆನ್ನಾಗಿತ್ತು ಎಂದು ಬೇರೆ ಭಾಷೆಗಳ ಪ್ರೇಕ್ಷಕರೂ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಶಸ್ತಿ ಬರಲೇ ಬೇಕಿದ್ದ ಕೆಲವು ಸಿನೆಮಾಗಳು ಇಲ್ಲಿವೆ.

ಸೂರ್ಯ ನಾಯಕನಾಗಿ ನಟಿಸಿರುವ ಈ ಕೋರ್ಟ್ ರೂಂ ಕತೆಗೆ ಒಂದೇ ಒಂದು ಪ್ರಶಸ್ತಿ ಸಿಗದಿರುವುದು ಬೇಸರದ ಸಂಗತಿ. ಏಕೆಂದರೆ ಜೈ ಭೀಮ್ ಚಿತ್ರದಲ್ಲಿ ಸೂರ್ಯ ಅಮೋಘ ಅಭಿನಯ ನೀಡಿದ್ದಾರೆ. ಸಿನ್ನತಳ್ಳಿಯಾಗಿ ಲಿಜೋಮೋಸ್ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದರು. ರಾಜಕುನ್ನನಾಗಿ ಸಿನ್ನತಳ್ಳಿಯ ಗಂಡನ ಪಾತ್ರದಲ್ಲಿ ಮಣಿಕಂದನ್ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಈ ಮೂವರಲ್ಲಿ ಒಬ್ಬರಿಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಯಾರಿಗೂ ಪ್ರಶಸ್ತಿ ಬಂದಿಲ್ಲ.

ಅದಾದ ನಂತರ ಸಾರ್ಪಟ್ಟ ಪರಂಪರೆ ಚಿತ್ರದ ಬಗ್ಗೆ ಮಾತನಾಡಬೇಕು. ಪಾ ರಂಜಿತ್ ನಿರ್ದೇಶನದ ಈ ಚಿತ್ರವು ಬಾಕ್ಸಿಂಗ್ ರಿಂಗ್ ಸುತ್ತ ಸುತ್ತುತ್ತಲೇ ಸಮಾಜದ ಜಾತಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮಾತನಾಡುತ್ತದೆ. ಅಮೆಜಾನ್ ಪ್ರೈಮ್ ನಲ್ಲಿ ನೇರವಾಗಿ ಬಿಡುಗಡೆಯಾದ ಸಾರ್ಪಟ್ಟ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರಕ್ಕಾಗಿ ಆರ್ಯ ಹಾಕಿದ ಶ್ರಮ ತೆರೆಯ ಮೇಲಿನ ಪ್ರತಿ ದೃಶ್ಯದಲ್ಲೂ ಗೋಚರಿಸುತ್ತದೆ. ಸಾರ್ಪಟ್ಟ ಪರಂಪರೈ ಚಿತ್ರಕ್ಕಾಗಿ ಆರ್ಯ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಅಥವಾ ಕನಿಷ್ಠ ವಿಶೇಷ ಉಲ್ಲೇಖ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಬಂದಿದ್ದರೆ ಚೆನ್ನಾಗಿತ್ತು.

ಈ ಪಟ್ಟಿಯಲ್ಲಿ ಕೊನೆಯದಾಗಿ ಉಲ್ಲೇಖಿಸಬೇಕಾದ ಚಿತ್ರವೆಂದರೆ ‘ಕರ್ಣನ್’. ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಧನುಷ್ ನಾಯಕನಾಗಿ ನಟಿಸಿರುವ ಕರ್ಣನ್ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಸುರನ್ ಅತ್ಯುತ್ತಮ ಸಿನೆಮಾ ಅಲ್ಲದಿರಬಹುದು ಆದರೆ ಖಂಡಿತವಾಗಿಯೂ ಒಳ್ಳೆಯ ಸಿನಿಮಾ. ಚಿತ್ರದಲ್ಲಿ ಧನುಷ್ ಕೂಡ ಪ್ರಶಸ್ತಿ ನೀಡುವ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಆದರೆ ಈ ಸಿನಿಮಾಗಾಗಿ ಮಲಯಾಳಂ ನಟ ‘ಲಾಲ್’ ಅವರಿಗೆ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ನೀಡಬಹುದು. ಏಕೆಂದರೆ ಲಾಲ್ ಇಲ್ಲದ ಕರ್ಣನ್ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಲಾಲ್ ಅವರ ಪಾತ್ರವನ್ನು ಚಿತ್ರಿಸಿದ ರೀತಿ, ಪಾತ್ರಕ್ಕೆ ನಿರ್ದೇಶಕರು ನೀಡಿದ ಅಂತ್ಯವು ರೋಮಾಂಚನ ನೀಡುತ್ತದೆ. ಹಾಗಾಗಿಯೇ ಈ ಪಾತ್ರ ರಾಷ್ಟ್ರ ಪ್ರಶಸ್ತಿಗೆ ಸಂಪೂರ್ಣ ಅರ್ಹವಾಗಿದೆ. ಕರ್ಣನ್, ಜೈ ಭೀಮ್, ಸಾರ್ಪಟ್ಟ ಪರಂಪರೈ ಚಿತ್ರಗಳು ಎಲ್ಲ ಬಗೆಯಲ್ಲೂ ಪ್ರಶಸ್ತಿಗಳಿಗೆ ಅರ್ಹವಾಗಿದ್ದ ಚಿತ್ರಗಳು ಆದರೆ ಅವುಗಳಿಗೆ ಒಂದೇ ಪ್ರಶಸ್ತಿ ಸಿಗದಿರುವುದು ತಮಿಳು ಪ್ರೇಕ್ಷಕರನ ನಡುವೆ ಆಕ್ರೋಶಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು