Monday, June 23, 2025

ಸತ್ಯ | ನ್ಯಾಯ |ಧರ್ಮ

ಹೆಡ್‌ ಬುಷ್: ಗೆಳೆಯನ ಬೆನ್ನಿಗೆ ನಿಂತ “ಕ್ವಾಟ್ಲೆ ಸತೀಶ”

ನಿನ್ನೆಯಿಂದ ಕಾವು ಪಡೆದುಕೊಂಡಿದ್ದ ಹೆಡ್‌ ಬುಷ್‌ ಸಿನೆಮಾದ ವಿವಾದವು ಸಿನೆಮಾ ಇಂದು ತುಂಬಿದ ಗೃಹಗಳಿಗೆ ಪ್ರದರ್ಶಗೊಳ್ಳುವುದರ ಜೊತೆ ಜೊತೆಗೆ ವಿವಾದವೆಬ್ಬಿಸಿದ್ದ ಕಿಡಿಗೇಡಿ ದನಿಗಳೂ ಉಡುಗಿ ಹೋಗಿವೆ. ಆದರೆ “ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಎಂದು ತನ್ನ ಮುಗ್ಧ ನಗುವಿನೊಡನೆ ಜನರ ಮನಸ್ಸು ಗೆದ್ದಿದ್ದ ಧನಂಜಯ ಅವರಿಗೆ ಹರಿದು ಬರುತ್ತಿರುವ ಬೆಂಬಲದ ಮಹಾಪೂರ ಇನ್ನೂ ನಿಂತಿಲ್ಲ.

ಬೆಂಬಲದ ಪ್ರವಾಹದಲ್ಲಿ ಮುಳುಗೇಳುತ್ತಿರುವ ಧನಂಜಯ ಅವರಿಗೆ ಈಗ ಅವರ ಗೆಳೆಯ ನೀನಾಸಂ ಸತೀಶ್‌ ಅವರು ಸಾಥ್‌ ನೀಡಿದ್ದು, ಗೆಳೆಯನ ಜೊತೆ ನಾನಿದ್ದೇನೆ ಎಂದು ಸಾರಿದ್ದಾರೆ. ಈ ಕುರಿತು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಸತೀಶ್‌, “ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ,” ಎಂದಿದ್ದಾರೆ.

ನೀನಾಸಂ ಸತೀಶ ಅವರ ಟ್ವೀಟ್

ನಿನ್ನೆ ವಿವಾದ ಆರಂಭಗೊಂಡಾಗಿನಿಂದ ಧನಂಜಯ ಅವರ ಚಿತ್ರಕ್ಕೆ ವಿದೇಶದಲ್ಲಿರುವವರು ಕೂಡಾ ಟಿಕೆಟ್‌ ಬುಕ್ ಮಾಡಿ ಬೆಂಬಲ ತೋರಿದ್ದರು. ಇಂದು ಬಹಳಷ್ಟು ಜನರು ಟಾಕೀಸಿಗೆ ಹೋಗಿ ಸಿನೆಮಾ ನೋಡಿ ತಮ್ಮ ಫೇಸ್ಬುಕ್‌ ಟ್ವಿಟರ್‌ ಖಾತೆಗಳಲ್ಲಿ ಫೋಟೊ ಹಾಕುತ್ತಿದ್ದಾರೆ. ಎಲ್ಲದಕ್ಕೂ ಧಾರ್ಮಿಕ ತಿರುವು ನೀಡುತ್ತಿದ್ದ ಕಿಡಿಗೇಡಿಗಳಿಗೆ ಜನರೇ ಸರಿಯಾಗಿ ಉತ್ತರಿಸುತ್ತಿದ್ದಾರೆನ್ನುವುದು ಜನರ ಅಂಬೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page