Wednesday, June 25, 2025

ಸತ್ಯ | ನ್ಯಾಯ |ಧರ್ಮ

ದೀಪಾವಳಿ ವಿಶೇಷವಾಗಿ ರಾಜ್ಯದಲ್ಲಿ ಹೊಸ ರೈಲುಗಳು

ದೀಪಾವಳಿ ಹಬ್ಬದ ವಿಶೇಷವಾಗಿ ಅಕ್ಟೋಬರ್ 22 ರಿಂದ ರಾಜ್ಯದ ವಿವಿಧೆಡೆಗಳಿಗೆ ಸುಲಭ ಪ್ರಯಾಣಕ್ಕೆಂದು ಭಾರತೀಯ ರೈಲ್ವೆ ಇಲಾಖೆ ಕಡೆಯಿಂದ ಹೊಸ ರೈಲುಗಳು ಕಾರ್ಯಾರಂಭ ಮಾಡಲಿವೆ. ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಈ ರೈಲುಗಳು ಸಂಚಾರ ಆರಂಭಿಸಲಿವೆ.

ಬೆಂಗಳೂರಿನಲ್ಲಿ ಇರುವವರು ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕಿಂಗ್ ಮಾಡಬಹುದು. ವಿಶೇಷವಾಗಿ ಈ ರೈಲುಗಳು ಸೂಪರ್ ಫಾಸ್ಟ್ ಸೌಲಭ್ಯ ಹೊಂದಿದ್ದು ವಾರಾಂತ್ಯದಲ್ಲಿ ರಜೆ ಹಾಕಿದ ಬೆಂಗಳೂರಿನ ಉದ್ಯೋಗಿಗಳಿಗೆ ಹೆಚ್ಚು ಅನುಕೂಲಕರವಾಗಲಿವೆ.

ಯಶವಂತಪುರ – ಶಿವಮೊಗ್ಗ ಎಕ್ಸಪ್ರೆಸ್
ಬೆಳಗ್ಗೆ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿರುವ ಈ ರೈಲು ಮಧ್ಯಾಹ್ನ 3.30ಕ್ಕೆ ಶಿವಮೊಗ್ಗ ರೈಲು ನಿಲ್ದಾಣವನ್ನು ತಲುಪಲಿದೆ. ಈ ರೈಲು ಸೀಮಿತ ನಿಲುಗಡೆ ಹೊಂದಿದ್ದು ಬೆಂಗಳೂರಿನಿಂದ ಶಿವಮೊಗ್ಗದ ನಡುವೆ ತುಮಕೂರು, ಅರಸೀಕೆರೆ, ಬೀರೂರು ಮತ್ತು ಭದ್ರಾವತಿಯಲ್ಲಿ ನಿಲುಗಡೆ ಇರಲಿದೆ.

ಹುಬ್ಬಳ್ಳಿ – ಬೆಂಗಳೂರು ಸೂಪರ್ ಫಾಸ್ಟ್
ಅಕ್ಟೋಬರ್ 22ರಂದು ಹುಬ್ಬಳ್ಳಿಯಿಂದ ಹೊರಡಲಿರುವ ಈ ರೈಲು ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿಗೆ ಹೊರಟು ರೈಲು ಬೆಳಗ್ಗೆ 9:30ಕ್ಕೆಲ್ಲ ಬೆಂಗಳೂರನ್ನು ತಲುಪಲಿದೆ. ಎಸ್.ಎಸ್.ಎಸ್ ಸೂಪರ್ ಫಾಸ್ಟ್ ಈ ರೈಲಿಗೆ ಬುಕ್ಕಿಂಗ್ ವ್ಯವಸ್ಥೆಯೂ ಇದೆ.

ಬೆಳಗಾವಿ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು
ಅಕ್ಟೋಬರ್ 26 ರಂದು ಬೆಳಗಾವಿ ರೈಲು ನಿಲ್ದಾಣದಿಂದ ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page