Monday, June 17, 2024

ಸತ್ಯ | ನ್ಯಾಯ |ಧರ್ಮ

ನಿದ್ದೆ ಮಾಡುವುದನ್ನು “ಜನಸಂಕಲ್ಪ” ಎಂದು ಕರೆದಿದ್ದಾರೆ: ಕರ್ನಾಟಕ ಕಾಂಗ್ರಸ್‌ ಟೀಕೆ

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆಯಾತ್ರೆ ಮಾಡುತ್ತಿರುವ ಹೊತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಸಂಕಲ್ಪ ಯಾತ್ರೆ ಮಾಡುತ್ತಿದೆ.

ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ! ಮುಖ್ಯಮಂತ್ರಿಗಳು ನಿದ್ದೆ ಮಾಡುವ ಸಮಯವನ್ನು “ಜನಸಂಕಲ್ಪ” ಎಂದು ಕರೆದುಕೊಳ್ಳುತ್ತಿದೆ ಎಂದು ಟೀಕೆ ಮಾಡಿದೆ.

ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರ ಬಸವರಾಜ್‌ ಬೊಮ್ಮಾಯಿ ಅವರು ನಿದ್ದೆಮಾಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದನ್ನು ಟ್ವೀಟ್‌ ಮಾಡುವ ಮೂಲಕ ಈ ರೀತಿ ಹೇಳಿದೆ.

ಬಿಜೆಪಿ ಸರ್ಕಾರದ ಬಳಿ ಹೇಳಲು ಸಾಧನೆಗಳು ಇಲ್ಲದಾಗ ನಿದ್ದೆ ಬರುವುದು ಸಹಜ ಅಲ್ಲವೇ #ಪೀಸಿಎಂ ಅವರೇ? ಎಂದು ವ್ಯಂಗ್ಯಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು