Tuesday, July 22, 2025

ಸತ್ಯ | ನ್ಯಾಯ |ಧರ್ಮ

ಸುಖಾಂತ್ಯದತ್ತ ನಿಮಿಷಾ ಪ್ರಿಯಾ ಪ್ರಕರಣ; ಸಧ್ಯದಲ್ಲೇ ಬಿಡುಗಡೆ ಸಾಧ್ಯತೆ

‘ಭಾರತ ಮತ್ತು ಯೆಮೆನ್‌ನ ಅಧಿಕಾರಿಗಳ ಪರಿಶ್ರಮದ ಫಲವಾಗಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ಸರ್ಕಾರ ರದ್ದುಗೊಳಿಸಿದೆ’ ಎಂದು ಗ್ಲೋಬಲ್‌ ಪೀಸ್‌ ಇನ್‌ಷಿಯೇಟಿವ್‌ ಸಂಸ್ಥಾಪಕ ಡಾ. ಕೆ.ಎ. ಪೌಲ್‌ ಹೇಳಿದ್ದಾರೆ. ಅದರಂತೆ ಹಲವು ಇನ್ನೇನು ಗಲ್ಲುಶಿಕ್ಷೆಗೆ ಗುರಿಯಾಗುವ ಹಂತದಲ್ಲಿದ್ದ ನಿಮಿಷಾ ಪ್ರಿಯಾ ಅವರ ಪ್ರಕರಣ ಸುಖಾಂತ್ಯದ ಹಂತಕ್ಕೆ ಬಂದಿದೆ.

‘ಸನಾ ಜೈಲಿನಲ್ಲಿರುವ ನಿಮಿಷ ಅವರನ್ನು ಒಮಾನ್‌, ಜೆಡ್ಡಾ, ಈಜಿಪ್ಟ್‌, ಇರಾನ್ ಅಥವಾ ಟರ್ಕಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿರುವ ಭಾರತಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಡಾ. ಪೌಲ್ ತಿಳಿಸಿದ್ದಾರೆ.

ನಿಮಿಷ ಪ್ರಿಯಾ ಪ್ರಕರಣ ಒಂದು ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲಾ ಆಯಾಮಗಳಿಂದ ಲಭ್ಯವಿರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದರು.

‘ಜುಲೈ 16ರಂದು ಮರಣದಂಡನೆಗೆ ನಿಗದಿಯಾಗಿದ್ದ ದಿನಾಂಕವನ್ನು ಯೆಮೆನ್‌ ಮುಂದೂಡಿದೆ. ಪ್ರಿಯಾ ಅವರ ಕುಟುಂಬದೊಂದಿಗೆ ಸಮಾಲೋಚಕರು ಸಂಪರ್ಕದಲ್ಲಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದೊಂದಿಗೆ ಸಚಿವಾಲಯ ಸಂಪರ್ಕದಲ್ಲಿದೆ’ ಎಂದು ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page