Thursday, June 19, 2025

ಸತ್ಯ | ನ್ಯಾಯ |ಧರ್ಮ

ಸುರತ್ಕಲ್‌ ಟೋಲ್‌ ಗೇಟ್‌ ವಿರುದ್ಧದ ಹೋರಾಟ: ನೂರಾರು ಹೋರಾಟಗಾರರ ಬಂಧನ

ಸುರತ್ಕಲ್:‌ ಇಂದು ನಡೆದ ಟೋಲ್‌ ಗೇಟ್‌ ವಿರೋಧಿ ಹೋರಾಟದ ಸಮಯದಲ್ಲಿ ಸರಕಾರವು ಮಿಥುನ್‌ ರೈ, ಮುನೀರ್‌ ಕಾಟಿಪಳ್ಳ, ಪ್ರತಿಭಾ ಕುಳಾಯಿ ಸೇರಿದಂತೆ ನೂರಾರು ಹೋರಾಟಗಾರರನ್ನು ಬಂಧಿಸಿ ವಶಕ್ಕೆ ಪಡೆದಿದೆ.

ಹಲವು ದಿನಗಳಿಂದ ಜನಸಾಮಾನ್ಯರ ನಡುವೆ ಚರ್ಚೆಯಲ್ಲಿದ್ದ ಪ್ರಮುಖ ನಾಯಕರುಗಳ ಬೆಂಬಲ ಪಡೆದಿದ್ದ ಹೋರಾಟಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಒಗ್ಗೂಡಿದ್ದರು. ಆಡಳಿತವು ಸಹ ನಿನ್ನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಹೋರಾಟವನ್ನು ಹತ್ತಿಕ್ಕಲು ಬೇಕಿದ್ದ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ಬಂಧನದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೋರಾಟಗಾರರು, ʼಒಂದು ಟೋಲ್ಗೇಟ್‌ ಅನಧಿಕೃತವೆಂದು ನೀವೇ ಒಪ್ಪಿಕೊಂಡೂ ಅದನ್ನು ತೆಗೆದು ಹಾಕಲಾಗದ ನಿಮ್ಮ ಅಸಹಾಯಕತೆಗೆ ನಮಗೆ ನಾಚಿಕೆಯಾಗುತ್ತಿದೆ, ಜನರು ನಿಮ್ಮನ್ನು ನಂಬಿ ಹೇಗೆ ಬದುಕುವುದು,” ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕುತ್ತಿದ್ದ ದೃಶ್ಯ ಸ್ಥಳದಲ್ಲಿ ಕಂಡುಬರುತ್ತಿತ್ತು.

ದೈತ್ಯ ಕಂಪನಿಯೊಂದರ ಎದುರು ಮಂಡಿಯೂರಿ ಜನರ ಶಾಂತಿಯುತ ಹೋರಾಟವನ್ನು ಹತ್ತಿಕ್ಕುತ್ತಿರುವುದು ನಾಚಿಕೆಗೇಡು ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೋರಾಟ ನಿಲ್ಲುವುದಿಲ್ಲ, ಇಂದು ನೀವು ಐನೂರು ಜನರನ್ನು ಬಂಧಿಸಿರಬಹುದು ಆದರೆ ನಾಳೆ ಇಲ್ಲಿ ಸಾವಿರ ಸಂಖ್ಯೆಯಲ್ಲಿ ಜನ ಬರಲಿದ್ದಾರೆ, ಇದು ಜನರ ಹೋರಾಟ ನೀವಿದನ್ನು ತಡೆಯಲಾರಿ ಎಂದು ನಾಯಕೊರಬ್ಬರು ಕಿಡಿಕಾರಿದರು. ಸ್ಥಳದಲ್ಲಿ ಮೊಹಮದ್ದ ಬಾವಾ ವಿನಯ್‌ ಕುಮಾರ್‌ ಸೊರಕೆ ಸೇರಿದಂತೆ ಹಲವು ರಾಜಕೀಯ ಮತ್ತು ಜನಪರ ಸಂಘಟನೆಗಳಿಗೆ ಸೇರಿದ ನಾಯಕರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page