Saturday, April 5, 2025

ಸತ್ಯ | ನ್ಯಾಯ |ಧರ್ಮ

ರೈತರ ಸಾಲ ವಸೂಲಿ ರೀತಿಗೆ ಬ್ಯಾಂಕ್ ವಿರುದ್ಧ ಆಕ್ರೋಶ – ಕಣಗಾಲ್ ಮೂರ್ತಿ

ಹಾಸನ: ರೈತರು ಹೋರಾಟ ಮಾಡಿದ ಹಿನ್ನಲೆಯಲ್ಲಿ ಸಾಲ ಮಾಡಿದವರ ಜಪ್ತಿ ಮಾಡುವುದನ್ನ ಸರಕಾರದವರು ನಿಲ್ಲಿಸಿದ್ದರು. ಮತ್ತೆ ಬ್ಯಾಂಕಿನವರು ಸಾಲದಲ್ಲಿ ಕಡಿಮೆ ಮಾಡದೇ ಪೂರ್ಣ ಕಟ್ಟಬೇಕು ಇಲ್ಲವಾದರೇ ಹರಾಜು ಹಾಕುವುದಾಗಿ ತಮಟೆ ಬಾರಿಸಿ ಕರಪತ್ರ ಹಂಚುತ್ತಿದ್ದಾರೆ. ಕೇಳಲು ಹೋಗಿದಕ್ಕೆ ಬ್ಯಾಂಕ್ ಮ್ಯಾನೇಜರ್ ಹಲ್ಲೆ ಮಾಡಿದ್ದಾರೆ. ಡಿಸಿಗೆ ನಮ್ಮ ಸಮಸ್ಯೆ ಹೇಳಲು ಹೋದರೆ ಕೇಳಲು ಸಿದ್ಧರಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಬೇಸರವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಾವೇರಿ ಗ್ರಾಮೀಣ ಬ್ಯಾಂಕಿನವರು ಅಡಗೂರಿನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕಿನ ಮ್ಯಾನೆಜರ್ ನಮಗೆ ಕಿರುಕುಳ ಕೊಡುತ್ತಿದ್ದಾರೆ. ಆಸ್ತಿ ಹರಾಜಿಗೆ ಇಟ್ಟಿರುವುದಾಗಿ ಡಂಗೂರ ಬಡೆಸಿದರು. ಬೇಲೂರು ತಾಲೂಕು ಅಡಗೂರು ಗ್ರಾಮದ ಶಿವಕುಮಾರ್ ಅವರ ಮೇಲೆ ಬ್ಯಾಂಕ್ ಮ್ಯಾನೆಜರ್ ಹಲ್ಲೆ ಮಾಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಲು ಹೋದರೇ ಸಾಲ ಕಟ್ಟಿ ಎಂದು ಹೇಳಿದಲ್ಲದೇ ನಮಗೆ ಸಮಯವಿಲ್ಲ ಎಂದು ಹೇಳಿ ಹೊರಟು ಹೋದರು ಎಂದು ಹೇಳಿದರು.


ಇದೆ ಏಪ್ರಿಲ್ 12 ರಿಂದ 14ರ ವರೆಗೂ ಮೂರು ದಿನಗಳ ಕಾಲ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನೇರ ಮಾರಾಟದ ಮೂಲಕ ನಮ್ಮ ಹೋರಾಟ, ನಮ್ಮ ಬೆಳೆಗೆ ನಮ್ಮದೆ ಬೆಲೆ ಘೋಷಣೆಯೊಂದಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಳಿ ಇರುವ ಮುನಿ ವೆಂಕಟಯ್ಯ ಸ್ಮಾರಕ ಬಯಲು ರಂಗಮAದಿರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿ ನಡೆಸಲಾಗುವುದು. ಹೆಚ್ಚು ಪ್ರಚಾರ ಮಾಡಿ ಸಂತೆಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಳ್ಳಿಗಳಿಂದ ವ್ಯವಸಾಯ ಬಿಟ್ಟು ಬದುಕು ಕಟ್ಟಿಕೊಳ್ಳಲು ಬಂದಿರುವವರೇ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ, ಈ ಕಾರ್ಯಕ್ರಮಕ್ಕೆ ನಮ್ಮ ನಿರೀಕ್ಷೆಗೆ ಮೀರಿದ ಸ್ಪಂದನೆ ಸಿಗುತ್ತದೆ ಎಂಬ ವಿಶ್ವಾಸ ರೈತ ಚಳವಳಿಗಿದೆ ಎಂದರು. ಈ ಮೊದಲ ಸಂತೆ ಯಶಸ್ಸು ಕಂಡಲ್ಲಿ, ಬೆಂಗಳೂರಿನ ಇತರೆ ಬಡಾವಣೆಗಳಲ್ಲಿ ಇಂತಹದೆ ಸಂತೆ ಮಾಡಲಾಗುವುದು. ಇದು ಯಾವುದೇ ಮಧ್ಯವರ್ತಿಗಳಿಲ್ಲದ ಮಾರುಕಟ್ಟೆ ಮತ್ತು ಕಮಿಷನ್ ರಹಿತ ಮಾರುಕಟ್ಟೆ. ರೈತರೇ ನೇರ ಬಂದು ತಮ್ಮ ಬೆಳೆಗಳನ್ನು ಈ ಮಾರುಕಟ್ಟೆಯಲ್ಲಿ ಮಾರತಕ್ಕದ್ದು. ಇಲ್ಲಿ ವ್ಯಾಪಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ರೈತ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳಿಗೆ ಕರೆ ಮಾಡಲು ಮೊಬೈಲ್ ಸಂಖ್ಯೆ 903 5454365 / 9036654365 ಗೆ ಸಂಪಕಿಸಬಹುದಾಗಿದೆ. ಕೆ.ಟಿ.ಗಂಗಾಧರ, ಪ್ರೊ.ರವಿ ವರ್ಮ ಕುಮಾರ್, ಶ್ರೀ.ರಾಮಣ್ಣ ಕೆಂಚಳ್ಳರ, ಶ್ರೀಮತಿ ಅನಸೂಯಮ್ಮ,ಶೀಮತಿ ಪಾರ್ವತಿ ಕಳಸಣ್ಣನವರ್, ಪ್ರೊ.ಹಿ.ಶಿ.ರಾಮಚಂದ್ರೇಗೌಡ ಗ್ಯಾರಂಟಿ ರಾಮಣ್ಣ, ಹೊನ್ನೂರು ಪ್ರಕಾಶ್, ಚುಕ್ಕಿ ನಂಜುAಡಸ್ವಾಮಿ ರಾಜ್ಯ ಅಧ್ಯಕ್ಷೀಯ ಮಂಡಳಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜು, ರೈತ ಮುಖಂಡ ಮರ್ಕುಲಿ ಪ್ರಕಾಶ್, ಶಿವಕುಮಾರ್ ಇತರರು ಉಪಸ್ಥಿತರಿದ್ದ

Related Articles

ಇತ್ತೀಚಿನ ಸುದ್ದಿಗಳು

You cannot copy content of this page