Wednesday, April 16, 2025

ಸತ್ಯ | ನ್ಯಾಯ |ಧರ್ಮ

ಯಶಸ್ವಿಗೊಂಡ ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ದೆ

ಹಾಸನ : ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಹೊಯ್ಸಳ ಚಿತ್ರಕಲಾ ಪರಿಷತ್, ಸಂಸ್ಕಾರ ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರದAದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ದೆಯನ್ನು ಅಂತರಾಷ್ಟಿçÃಯ ಕಲಾವಿದ ಕೆ.ಟಿ. ಶಿವಪ್ರಸಾದ್ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರುನಂತರ ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯ ಮಧ್ಯೆ ಇದ್ದರೇ ಕಲಾವಿದನಿಗೆ ತನ್ನದೆಯಾದ ಭಾವನೆಗಳು ಉಂಟಾಗಿ ಅದು ಚಿತ್ರದ ಮೂಲಕ ಹೊರ ಹಾಕುತ್ತದೆ. ಒಬ್ಬ ಕಲಾವಿದನಿಗೆ ಗಿಡ, ಮರಗಳು ಪ್ರೇರಣೆ ನೀಡುತ್ತದೆ. ಕಲಾಭವನ ನೋಡಿದರೇ ಸುತ್ತ ಮರಗಳು ಕಾಣುತ್ತಿದೆ. ಇದೆಲ್ಲಾ ನೋಡಿದರೇ ಮನಸ್ಸಿಗೆ ಆನಂದ ಉಂಟಾಗುತ್ತದೆ ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ, ಮಕ್ಕಳಿಗೆ ಕಲೆ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಚಿತ್ರಕಲೆಯನ್ನು ಆಯೋಜನೆ ಮಾಡಲಾಗಿದೆ. ತೇಜಸ್ವಿಯವರು ಹೆಚ್ಚು ಪರಿಸರವನ್ನು ಇಷ್ಟು ಪಡುತ್ತಿದ್ದರು. ಅಂತಹ ಪುಣ್ಯ ಪರುಷರ ಜೊತೆ ಶಿವಪ್ರಸಾದ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ ಎಂದರು. ಯಾವುದೆ ಮಹತ್ವದ ದಿನ ಇದ್ದರೇ ಅದನ್ನ ಕಿರಿಯರಿಗೆ ಹೇಳಿಕೊಡುತ್ತಾ ಹೋಗಬೇಕು. ಹಿಂದಿನವರು ಮಾಡುತ್ತಿದ್ದ ಹಲವಾರು ಆಚರಣೆಗಳು ಕಣ್ಮರೆ ಆಗುತ್ತಿದೆ. ಈಗ ಮೊಬೈಲ್ ಯುಗ ಆಗಿರುವುದರಿಂದ ಮೊಬೈಲ್ಗೆ ಮೊರೆ ಹೋಗುತ್ತಿದ್ದೇವೆ. ಮುಂದಿನ ದಿನಗಳನ್ನು ನೆನಪಿಸಿಕೊಂಡರೇ ಭಯವಾಗುತ್ತದೆ. ನಾವು ಬೆಳೆದ ರೀತಿಯಲ್ಲಿ ಮಕ್ಕಳು ಬೆಳೆಯುತ್ತಿಲ್ಲ. ನಮ್ಮ ತಂದೆತಾಯಿ ರೀತಿಯಲ್ಲಿ ನಾವು ಬೆಳೆದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರ ಜ್ಞಾನ ಮುಂದುವರೆಯುತ್ತಿದೆ. ಇದರಿಂದ ಮಾನವಿಯ ಮೌಲ್ಯಗಳು ಮರೆಯಾಗುತ್ತದೆಯೂ ಎಂಬುದು ಒಂದು ಆತಂಕದ ಸನ್ನಿವೇಶವಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಮೊಬೈಲ್ ಗೆ ಮಾರು ಹೋಗದಂತೆ ಇಂತಹ ಚಿತ್ರಕಲೆ ಸೇರಿದಂತೆ ಎಲ್ಲಾ ಕಲೆ ಬಗ್ಗೆ ಮೈಗೂಡಿಸುವಂತಹ ಕೆಲಸವನ್ನು ಬಾಲ್ಯದಿಂದಲೇ ಮಾಡಬೇಕು ಎಂದು ಕಿವಿಮಾತು ಹೇಳಿದರು. ಪ್ರಾರಂಭದಲ್ಲಿ ಇಂತಹ ಕಲೆಗೆ ಪೋಷಕರು ತಮ್ಮ ಮಕ್ಕಳನ್ನು ಬಿಡುತ್ತಾರೆ. ನಂತರದಲ್ಲಿ ಮಕ್ಕಳನ್ನು ಅಂಕಗಳಿಸುವ ರೇಸಿಗೆ ಕಳುಹಿಸುತ್ತಿದ್ದು, ದಯಮಾಡಿ ಅಂತಹ ಕೆಲಸವನ್ನು ಮಾಡಬೇಡಿ ಎಂದು ಸಲಹೆ ನೀಡಿದರು. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಅದರಲ್ಲಿಯೇ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಅವಕಾಶ ನೀಡಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣದ ಚಿತ್ರಕಲಾವಿದ ಹೆಚ್.ಎಸ್. ಮಂಜುನಾಥ್ ಸ್ಥಳದಲ್ಲಿಯೇ ಚಿತ್ರ ಬರೆಯುವುದರ ಮೂಲಕ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ನಂತರ ಚಿತ್ರಕಲಾ ಸ್ಪರ್ದೆಯಲ್ಲಿ ಭಾಗವಹಿಸಿದ ಶಾಲಾ ಮಕ್ಕಳಲ್ಲಿ ಅತ್ಯುತ್ತಮವಾಗಿ ಚಿತ್ರ ಬರೆದ ಮಕ್ಕಳಿಗೆ ಇದೆ ವೇಳೆ ಆಕರ್ಷಕ ಬಹುಮಾನ ವಿತರಣೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page