Friday, June 14, 2024

ಸತ್ಯ | ನ್ಯಾಯ |ಧರ್ಮ

ಸರಿಯಾಗಿ ನಡೆಸಿಕೊಂಡಿಲ್ಲ: ಭಾರತದ ವಿರುದ್ಧ ಐಸಿಸಿಗೆ ಪಾಕ್‌ ತಂಡ ದೂರು

ಬೆಂಗಳೂರು,ಅಕ್ಟೋಬರ್.‌18:  ಐಸಿಸಿ ಪುರುಷರ ODI ವಿಶ್ವಕಪ್ 2023 ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಮಾಧ್ಯಮಗಳಿಗೆ ಮತ್ತು ಪಾಕಿಸ್ತಾನಿ ಬೆಂಬಲಿಗರಿಗೆ ವೀಸಾ ನೀಡುವಲ್ಲಿ ವಿಳಂಬ  ಮಾಡಿರುವುದಕ್ಕೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ( International Cricket Council) ತನ್ನ ಪ್ರತಿಭಟನಾತ್ಮಕ ಮನವಿಯನ್ನು ಮಂಗಳವಾರ ಸಲ್ಲಿಸಿದೆ.

ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನ ತಂಡವನ್ನು ಗುರಿಯಾಗಿಟ್ಟುಕೊಂಡು  ಮಾಡಿರುವ ಅನುಚಿತ ವರ್ತನೆಗೆ ಪಾಕಿಸ್ತಾನ ತಂಡ ಪ್ರತಿಭಟನೆಯನ್ನು ದಾಖಲಿಸಿದೆ.

ಯಾವ ದುಷ್ಕೃತ್ಯದ ವಿರುದ್ಧ PCB ನಿರ್ದಿಷ್ಟವಾಗಿ ದೂರು ನೀಡುತ್ತಿದೆ ಎಂಬುದು ಅಸ್ಪಷ್ಟವಾಗಿದೆ. ಭಾರತ-ಪಾಕಿಸ್ತಾನ ಪಂದ್ಯದ ನಂತರ, ಪಾಕಿಸ್ತಾನಿ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ ವೀಡಿಯೊಗಳು Xನಲ್ಲಿ ವೈರಲ್‌ ಆಗಿದ್ದವು.

ವಿಶ್ವಕಪ್‌ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಬಯಸುವ ಪಾಕಿಸ್ತಾನಿ ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ನಿಧಾನಗತಿಯಲ್ಲಿ ವೀಸಾ ನೀಡುವಿಕೆಯ ಬಗ್ಗೆ ಚರ್ಚಿಸಲು ಪಿಸಿಬಿ ಮಧ್ಯಂತರ ನಿರ್ವಹಣಾ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಸೋಮವಾರ ಸೈರಸ್ ಸಜ್ಜದ್ ಖಾಜಿ ಅವರನ್ನು ಭೇಟಿ ಮಾಡಿದ್ದಾರೆ.

ಅಲ್ಲದೇ, ಪಾಕಿಸ್ತಾನದ ವಿಕೆಟ್ ಕೀಪರ್ ರಿಜ್ವಾನ್ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಭಾರತೀಯ ವಕೀಲರು ಐಸಿಸಿಗೆ ದೂರು ಸಲ್ಲಿಸಿದ್ದರು. ಶ್ರೀಲಂಕಾ ವಿರುದ್ಧದ ಗೆಲುವಿನಲ್ಲಿ ತನ್ನ ಕೊಡುಗೆಯನ್ನು ಪ್ಯಾಲೆಸ್ತೀನ್‌ನ ಸಂತ್ರಸ್ತರಿಗೆ ಅರ್ಪಿಸುವ ಮೂಲಕ ರಿಜ್ವಾನ್ ಆಟದ ಸ್ಪಿರಿಟ್‌ಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ವಕೀಲರು ತಮ್ಮ ಪ್ರಕರಣದಲ್ಲಿ ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದಿನ ಟ್ವೀಟ್‌ಗಳ ಆಧಾರದ ಮೇಲೆ ಪಾಕಿಸ್ತಾನಿ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು