Friday, June 14, 2024

ಸತ್ಯ | ನ್ಯಾಯ |ಧರ್ಮ

ತಮಿಳುನಾಡು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ‌

ಚೆನ್ನೈ: ರಾಜಭವನದ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಕಾರಣ ತಮಿಳುನಾಡು ರಾಜಭವನದಲ್ಲಿ ಬುಧವಾರ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ದಾಳಿಯ ಮೂಲಕ ರಾಜಭವನದ ಮುಖ್ಯ ದ್ವಾರದ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆಗೆ ಕಾರಣನಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾಜಭವನದ ಮುಖ್ಯ ಗೇಟ್‌ಗೆ ದಾರಿಹೋಕನೊಬ್ಬ ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾನೆ. ಇದರಿಂದ ಅಲ್ಲಿದ್ದ ಬ್ಯಾರಿಕೇಡ್‌ಗಳು ಧ್ವಂಸವಾಗಿವೆ. ರಸ್ತೆಯ ಒಂದು ಭಾಗ ಹಾಳಾಗಿದೆ. ಕೂಡಲೇ ಅವನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕರುಕ ವಿನೋದ್ ಎಂದು ಗುರುತಿಸಲಾಗಿದೆ. ಘಟನೆ ನಡೆದಾಗ ರಾಜ್ಯಪಾಲರು ರಾಜಭವನದಲ್ಲಿದ್ದಂತೆ ಕಾಣುತ್ತದೆ.

ಸೈದಾಪೇಟೆ ನ್ಯಾಯಾಲಯದ ಹೊರಗೆ ನಿಲ್ಲಿಸಿದ್ದ ಬೈಕ್‌ಗಳಲ್ಲಿ ಪೆಟ್ರೋಲ್ ಕಳವು ಮಾಡಿದ್ದ ವಿನೋದ್ ರಾಜಭವನದತ್ತ ನಡೆದುಕೊಂಡು ಬಂದಿದ್ದಾನೆ. ಅವನು ನಿಧಾನವಾಗಿ ಎರಡು ಬಾಟಲಿಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಮುಖ್ಯ ಗೇಟಿನ ಕಡೆಗೆ ಎಸೆದನು. ನಂತರ ಅವನು ನೀಟ್ ಮಸೂದೆ ಹಾಗೂ ಆರ್ ಎನ್ ರವಿ ವಿರುದ್ಧ ರಾಜ್ಯಪಾಲರು ಘೋಷಣೆ ಕೂಗಿದನು.

ಆದರೆ ಅಷ್ಟರಲ್ಲಿ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಆತನಿಂದ ಇನ್ನೂ ಎರಡು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯಪಾಲ ಆರ್ ಎನ್ ರವಿ ಅವರು ನೀಟ್ ವಿರೋದಿ ಮಸೂದೆಗೆ ಅನುಮತಿ ನೀಡದ ಕಾರಣ ವಿನೋದ್ ಈ ದಾಳಿ ನಡೆಸಿರಬಹುದು ಎಂದು ಪ್ರಾಥಮಿಕವಾಗಿ ಭಾವಿಸಲಾಗಿದೆ.

ಈ ಪ್ರಕರಣದ ಇನ್ನೊಂದ ಅಂಶ ಏನೆಂದರೆ, 2022ರಲ್ಲಿ ಚೆನ್ನೈ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ವಿನೋದನನ್ನು ಬಂಧಿಸಲಾಗಿತ್ತು. ಆತ ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.

ಈ ಘಟನೆಯ ವಿರುದ್ಧ ಬಿಜೆಪಿ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ರಾಜಭವನದ ಮೇಲಿನ ದಾಳಿಯು ಈ ಸರ್ಕಾರವು ಶಾಂತಿ ಮತ್ತು ಭದ್ರತೆಯನ್ನು ಎಷ್ಟರ ಮಟ್ಟಿಗೆ ರಕ್ಷಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು