Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಹಾರದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕ್ಷುಬ್ಧತೆ

ಬಿಹಾರದ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ. ಅತ್ತ ಪಟ್ನಾದಲ್ಲಿ ಬಿಜೆಪಿ ಪಕ್ಷವು ತನ್ನ ಪಕ್ಷದ ಸಂಸದರು, ಶಾಸಕರ ಸಭೆಗೆ ಕರೆ ಕೊಟ್ಟಿದ್ದರೆ, ಮತ್ತೊಂದು ಕಡೆ, ಪುರ್ನಿಯಾದಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೆ ಕರೆ ಕೊಟ್ಟಿರುವುದು ಜನರಲ್ಲಿ ಕುತೂಹಲದ ಜೊತೆ, ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತಿದೆ

ಪಾಟ್ನಾ: ಬಿಹಾರದ ಆಡಳಿತ ‘ಮಹಾಘಟಬಂಧನ್’ ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ.

ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ.

ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಚೌಧರಿ, “ನಮ್ಮ ಮಟ್ಟದಲ್ಲಿ ಅಂತಹ ಯಾವುದೇ ವಿಷಯ ಚರ್ಚಿಸಲಾಗಿಲ್ಲ” ಎಂದು ಹೇಳಿದರು. ಇದೇ ಸಮಯದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, “ರಾಜಕೀಯದಲ್ಲಿ ಯಾವುದೇ ಬಾಗಿಲು ಮುಚ್ಚಿಲ್ಲ, ಅಗತ್ಯ ಬಿದ್ದಾಗ ಬಾಗಿಲು ತೆರೆಯಬಹುದು” ಎಂದು ಹೇಳಿಕೆ ಕೊಡುವುದರ ಮೂಲಕ, ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾರೆ.

ಏತನ್ಮಧ್ಯೆ, ಬಿಹಾರ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪೂರ್ಣೆಯಾದಲ್ಲಿ, ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

“ಎಲ್ಲಾ ಕಾಂಗ್ರೆಸ್ ಶಾಸಕರು (ಇಂದಿನ ಮತ್ತು ಮಾಜಿ) ಮತ್ತು ಪಕ್ಷದ ಹಿರಿಯ ನಾಯಕರು ನಾಳೆ ಪೂರ್ಣೆಯಾದಲ್ಲಿ ಸಭೆ ಸೇರಿ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 29 ರಂದು ಬಿಹಾರಕ್ಕೆ ಪ್ರವೇಶಿಸಿದಾಗ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ವರದಿಗಳನ್ನೂ ” ಎಂದು ಖಾನ್ ತಿಳಿಸಿದರು.

ಜನವರಿ 29ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದ್ದು, ಅದೇ ದಿನ ಕಿಶನ್‌ಗಂಜ್‌ನಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ. ತದ ನಂತರ ಜನವರಿ 30 ಮತ್ತು 31 ರಂದು ಕ್ರಮವಾಗಿ ಪೂರ್ಣೆಯಾ ಮತ್ತು ಕತಿಹಾರ್‌ನಲ್ಲಿ ಎರಡು ರ್ಯಾಲಿಗಳು ನಡೆಯಲಿವೆ” ಎಂದು ಖಾನ್ ಮಾಧ್ಯಮಗಳಿಗೆ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು