Wednesday, May 7, 2025

ಸತ್ಯ | ನ್ಯಾಯ |ಧರ್ಮ

ಕಳಪೆ ಕಾಮಗಾರಿ ಕ್ರೀಡಾಂಗಣ ನೆಲಹಾಸು ಕುಸಿತ ಸಾರ್ವಜನಿಕರ ಆಕ್ರೋಶ

ಬೇಲೂರು : ಕ್ರೀಡಾಪಟುಗಳ ಅನುಕೂಲಕ್ಕಾಗಿ ಪಟ್ಟಣ ಸಮೀಪದ ಎಸ್.ಸೂರಾಪುರ ಮುರಾರ್ಜಿ ವಸತಿ ಶಾಲೆ ಪಕ್ಕದಲ್ಲಿರುವ ಕ್ರೀಡಾಂಗಣದ ವೇದಿಕೆಯ ನೆಲ ಹಾಸು ಐದಾರು ದಿನಗಳ ಹಿಂದೆ ಸುರಿದ ಮಳೆಗೆ ಕುಸಿದು ಬಿದ್ದಿರುವುದು ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಶಾಸಕರ ಅನುದಾನದಲ್ಲಿ ತಾಲೂಕಿನ ಕ್ರೀಡಾ ಪಟುಗಳ ಅನುಕೂಲ ಕ್ಕಾಗಿ ನಿರ್ಮಾಣ ಹಂತ ದಲ್ಲಿರುವ ಕ್ರೀಡಾಂಗಣದ ಕಾಮಗಾರಿ ಸಾಕಷ್ಟು ವರ್ಷಗಳಿಂದಲೂ ಕುಂಟುತ್ತ ಸಾಗುತ್ತಿದೆ ಕೋಟ್ಯಂತರ ರೂ. ವೆಚ್ಚದಲ್ಲಿ ಕ್ರೀಡಾಂಗಣದ ಕಾಮಗಾರಿ ಮಾಡಿಸಲು ಸರ್ಕಾರ ಮುಂದಾಗಿದೆ. ಆದರೆ,ಇಲ್ಲಿ ಕೆಲವರಷ್ಟೇ ಕುಳಿತು ಕೊಳ್ಳಲು ಕಾಂಕ್ರೀಟ್‌ನಿಂದ ನಿರ್ಮಿಸಿದ್ದ ಆಸನ ಹಾಗೂ ತಳ ಭಾಗದಲ್ಲಿ ಕಿರಿದಾದ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅದನ್ನುಬಿಟ್ಟರೆ ಇತ್ತೀಚಿನ ದಿನ ಗಳಲ್ಲಿ ಆಸನದ ಮೇಲ್ಭಾಗಕ್ಕೆ ಛಾವಣಿ ಹಾಕಲು ಪಿಲ್ಲರ್‌ಗಳನ್ನು ನಿಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ ಜತೆಗೆ ಇಲ್ಲಿ ಕ್ರೀಡಾಪಟುಗಳಿಗೆ ಬೇರೆ ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ಇರುವ ಮೈದಾನದಲ್ಲಿ ಕೆಲವರು ಅಭ್ಯಾಸ ಮಾಡುತಿದ್ದಾರೆ. ಇದರೊಂದಿಗೆ ಕೇವಲ 4 ತಿಂಗಳ ಹಿಂದಷ್ಟೇ ಕ್ರೀಡಾಂಗಣದ ಆಸನದ ಮುಂದಿರುವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯಕ್ರಮ ಗಳಿಗೆ ಅನುಕೂಲವಾ ಗಲಿ ಎಂಬ ಉದ್ದೇಶದಿಂದ ಕಾಂಕ್ರೀಟ್‌ನಿಂದ ವೇದಿಕೆ ನಿರ್ಮಿಸಲಾಗಿತ್ತು ಆದರೆ, ಐದಾರು ದಿನಗಳ ಹಿಂದಷ್ಟೇ ಬಂದ ಮಳೆಗೆ ವೇದಿಕೆ ಮುಂಭಾಗದಲ್ಲಿ ಕೇವಲ ಕಲ್ಲುಗಳಿಂದ ಕಟ್ಟಿದ್ದ ತಡೆಗೋಡೆ ಮತ್ತು ವೇದಿಕೆಯ ನೆಲಹಾಸು ನೀರಿನಲ್ಲಿ ನೆನೆದು ಟ್ರಾಕ್ ಮೇಲೆಯೇ ಸಂಪೂರ್ಣ ವಾಗಿ ಕುಸಿದು ಬಿದ್ದಿದೆ. ಇದರೊಂದಿಗೆ ಅಕ್ಕಪಕ್ಕ ದಲ್ಲಿಯೂ ಬಿರುಕು ಬಿಟ್ಟಿದ್ದು, ಅದು ಮತ್ತೆ ಯಾವಾಗ ಬೀಳು ತ್ತದೆಯೋ ತಿಳಿಯದಂ ತಾಗಿದೆ.

ಇಷ್ಟೇ ಅಲ್ಲದೆ ಜೋರಾಗಿ ಮಳೆ ಬಂದರೆ ಮಳೆ ನೀರೆಲ್ಲ ಹೊರ ಹೋಗದೆ ಟ್ರಾಕ್ ಮೇಲೆಯೇ ನೀರು ನಿಲ್ಲುವುದರಿಂದ ಹಾಗೂ ಟ್ರ್ಯಾಕ್ ಮೇಲೆಯೇಗಿಡಗಂಟಿಗಳು ಬೆಳೆದು ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಕ್ರೀಡಾಂಗಣಕ್ಕೆ ಬರುವ ಕ್ರೀಡಾಪಟುಗಳಿಗೆ, ವಾಯು ವಿಹಾರಿಗಳಿಗೆ ಸಾಕಷ್ಟು ಅನಾನುಕೂ ಲವಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ನಿರ್ಮಿತಿ ಕೇಂದ್ರದವರಾಗಲಿ, ಗುತ್ತಿಗೆದಾರನಾಗಲಿ ಅಥವಾ ಸಂಬಂಧಿಸಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಕ್ರೀಡಾಂಗಣಕ್ಕೆ ಆಗಮಿಸಿ ವೇದಿಕೆಯ ತಡೆಗೋಡೆ ಬಿದ್ದಿರುವುದನ್ನು ವೀಕ್ಷಿಸಿ ತೆರವುಗೊಳಿಸಿ ಹೊಸದಾಗಿ ತಡೆಗೋಡೆ ನಿರ್ಮಿಸುವುದಾಗಲಿ, ಟ್ರ್ಯಾಕ್‌ನಲ್ಲಿ ನಿಂತಿರುವ ನೀರನ್ನು ತೆರವು ಮಾಡದೆ ಮತ್ತು ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದೆ ಕಣ್ಣು ಮುಚ್ಚಿ ಕುಳಿತಿದೆ. ಅಲ್ಲದೆ ಕ್ರೀಡಾಂಗಣದ ಕಾಮಗಾರಿ ನಿರ್ವಹಣೆ ಮಾಡಿಸು ತ್ತಿರುವ ನಿರ್ಮಿತಿ ಕೇಂದ್ರ ದವರ ನಿರ್ಲಕ್ಷ್ಯವೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದ್ದು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ವಿವಿಧ ಪ್ರಗತಿಪರ ಸಂಘಟನೆ ಗಳು ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ಎಂ ಮಮತ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಅಲ್ಲದೆ ಇದರ ಬಗ್ಗೆ ದೂರು ನೀಡಲಾಗುವುದು ಎಂದು ತಿಳಿಸಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page