Monday, June 24, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿನಲ್ಲಿ ವಿದ್ಯುತ್‌ ದುರಸ್ತಿ ಕಾಮಗಾರಿ : 2 ದಿನಗಳ ಕಾಲ ಪವರ್‌ ಕಟ್

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ(BESCOM) & ವಿದ್ಯುತ್‌ ಸರಬರಾಜು ಕಂಪನಿಗಳು ಇಂದು ನಗರದಾದ್ಯಂತ ಹಲವಾರು ನಿಯತಕಾಲಿಕ ನಿರ್ವಹಣೆ & ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದು, ನಗರದ ಹಲವೆಡೆ ಇವತ್ತಿನಿಂದ ಎರಡು ದಿನಗಳ (ಶನಿವಾರ, ಭಾನುವಾರ ) ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.
ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಈ ಪ್ರದೇಶಗಳಲ್ಲಿ ಪವರ್‌ ಕಟ್‌ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜ್ಞಾನಭಾರತಿ, ಕೆಂಚೇನಹಳ್ಳಿ, ರಾಜರಾಜೇಶ್ವರಿ ನಗರ, ಬಾಪೂಜಿನಗರ, ದೀಪಾಂಜಲಿನಗರ, ಅತ್ತಿಗುಪ್ಪೆ, ಗಂಗೊಂಡನಹಳ್ಳಿ,ಪಂತರಪಾಳ್ಯ, ಕೆಂಗೇರಿ, ಕೆಂಗೇರಿ ಉಪನಗರ, ವಿಶ್ವೇಶ್ವರಯ್ಯ ಲೇಔಟ್‌, ಆರ್‌.ಆರ್ ಲೇಔಟ್‌, ಕೊಡಿಗೇಹಳ್ಳಿ, ಮರಿಯಪ್ಪನಪಾಳ್ಯ, ಮುದ್ದಿನಪಾಳ್ಯ, ಬಂಡೇಮಠ, ಸುಭಾಷ್‌ನಗರ, ಗಿರಿನಗರ, ದುರ್ಗಾಂಬಿಕಾ ದೇವಸ್ಥಾನ, ರಾಮಚಂದ್ರಾಪುರ, ಜಾಲಹಳ್ಳಿ ಗ್ರಾಮ, ಚಾಮುಂಡೇಶ್ವರಿ ಲೇಔಟ್, ಎಂಟಿಆರ್ಡಿಸಿ ಬೆಲ್, ಅಳಗವಾಯಿ, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ.ಮದಕರಿಪುರ, ದೊಡ್ಡಿಗಾನಲ್, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ ವೃತ್ತ, ಶ್ರೀರಾಮ ಬಡವಾಣೆ, ಕರಿಯಮ್ಮ ದೇವಸ್ಥಾನ, ಜಯನಗರ , ಭಗೀರಥ ವೃತ್ತ, ಬಿಇಎಲ್ ಕಾಲೋನಿ,ಬ್ಯಾಂಕ್‌ ಕಾಲೋನಿ, ಶ್ರೀನಗರ, ಹೊಸಕೆರೆಹಳ್ಳಿ, ವಿದ್ಯಾಪೀಠ, ತ್ಯಾಗರಾಜನಗರ, ಅವಲಹಳ್ಳಿ, ಮೈಸೂರುರಸ್ತೆ ಸುತ್ತಮುತ್ತಲಿನ ಪ್ರದೇಶ, ಉಲ್ಲಾಳ ಮುಖ್ಯರಸ್ತೆ, ಎಪಿಎಂಸಿ ಲೇಔಟ್‌, ಮಲ್ಲತ್ತಹಳ್ಳಿ, ದೊಡ್ಡಬಸ್ತಿ, ಚಿಕ್ಕಬಸ್ತಿ, ಅಂಜನಾನಗರ, ದೊಡ್ಡಗೊಲ್ಲರಹಟ್ಟಿ, ಕನ್ನಲ್ಲಿ, ಹೇರೋಹಳ್ಳಿ ಹನುಮಂತನಗರ, ನಾಗೇಂದ್ರ ಬ್ಲಾಕ್‌ ಇದಿಷ್ಟೂ ಪ್ರದೇಶಗಳಲ್ಲಿ ಇಂದು ಸಂಜೆ 5ರವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಅಬ್ಬಿಗೆರೆ ವಿದ್ಯುತ್‌ ನಿರ್ವಹಣಾ ಕೇಂದ್ರದಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಕಲಾನಗರ, ಕುವೆಂಪುನಗರ, ಎಚ್‌.ವಿ.ವಿ ಲೇಔಟ್, ಧನಪಾಲ್‌ ಲೇಔಟ್‌, ಕಮ್ಮಗೊಂಡನಹಳ್ಳಿ, ಶೆಟ್ಟಿಹಳ್ಳಿ, ಏರ್‌ಫೋರ್ಸ್‌, ಸಿಂಗಾಪುರ, ಭದ್ರಸ್ವಾಮಿ ಲೇಔಟ್‌, ನಿಸರ್ಗಲೇಔಟ್‌, ಕಾನ್ಶಿರಾಮನಗರ, ನೇತಾಜಿ ಲೇಔಟ್‌, ಸೆವೆನ್‌ ಹಿಲ್ಸ್‌ ಕೌಂಟಿ,, ಲಕ್ಷ್ಮೀಪುರ ಮುಖ್ಯರಸ್ತೆ, ಬ್ರಿಗೇಡ್‌ ಅಪಾರ್ಟ್‌ಮೆಂಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶ, ಕೆಂಪೇಗೌಡ ಗಾರ್ಡನ್‌, ಕೆ.ಜಿ ಹಳ್ಳಿ, ಕಲಾನಗರ, ಶಿವನಕೆರೆ, ಹಿರೇಗಬ್ಬಿಗೆರೆ, ಎನ್‌ ಬಾಳಿಗಟ್ಟೆ, ವಿನಾಯಕ ನಗರ, ಅಡವಿಗೊಲ್ಲರಹಳ್ಳಿ ಮತ್ತಷ್ಟು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್‌ ಕಟ್‌ ಆಗಲಿದೆ.

Related Articles

ಇತ್ತೀಚಿನ ಸುದ್ದಿಗಳು