Saturday, December 21, 2024

ಸತ್ಯ | ನ್ಯಾಯ |ಧರ್ಮ

ಸಿಟಿ ರವಿ ಅಶ್ಲೀಲ ಪದ ಬಳಕೆ ಖಂಡಿಸಿ ಹಾಸನ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ: ಆಕ್ರೋಶ


ಹಾಸನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ. ರವಿ ಅವರು ಬಳಕೆ ಮಾಡಿರುವ ಅವಾಚ್ಯ ಪದವನ್ನು ಖಂಡಿಸಿ ಕಾಂಗ್ರೆಸ್ ಕಚೇರಿ ಎದುರು ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.


ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್ ಮಾತನಾಡಿ, ಸಿಟಿ ರವಿ ಅವರು ಬಿಜೆಪಿ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರು ಮಹಿಳೆಯರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವುದು ಮಹಿಳೆಯರಿಗೆ ಅವರು ತೋರಿಸುವ ಗೌರವವನ್ನು ಸೂಚಿಸುತ್ತದೆ. ತುಂಬಿದ ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರಾಗಿರುವ ಲಕ್ಷಿ÷್ಮ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿರುವ ಪದ ಅವರ ಸಂಸ್ಕöÈತಿಯನ್ನು ತೋರಿಸುತ್ತದೆ. ಭೇಟಿ ಬಚಾವೋ ಭೇಟಿ ಪಡವೋ ಎಂಬ ಮಾತುಗಳನ್ನು ಆಡುವ ಅವರದೇ ಪಕ್ಷದ ಪ್ರಧಾನಿ ಅವರು ಸಿ.ಟಿ ರವಿ ಅವರ ಮಾತುಗಳಿಗೆ ಉತ್ತರ ನೀಡಬೇಕು ಎಂದರು. ಈ ಹಿಂದೆ ಚಿಕ್ಕಮಗಳೂರಿನಲ್ಲಿ ಅಲ್ಲಿನ ಜನ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸುವ ಕೆಲಸ ಮಾಡಿದ್ದಾರೆ ಆದರೂ ಕೇಂದ್ರದ ನಾಯಕರು ಆತನನ್ನು ಎಂಎಲ್ಸಿ ಮಾಡುವ ಮೂಲಕ ಹೊಲಸು ಮಾತುಗಳನ್ನು ಆಡುವ ಸಿಟಿ ರವಿ ಅವರನ್ನು ಮಹಿಳೆಯರ ವಿರುದ್ದ ಮಾತನಾಡಲು ಬಿಟ್ಟಿದ್ದಾರೆ. ಅವರು ಇದೆ ರೀತಿ ಮಾತುಗಳನ್ನು ಆಡುತ್ತಿದ್ದರೆ ಮಹಿಳೆಯರಿಂದಲೇ ತಕ್ಕ ಶಾಸ್ತಿ ಆಗಲಿದೆ ಎಂದು ಎಚ್ಚರಿಸಿದರು. ಅವರ ಮನೆಯಲ್ಲಿ ಕೂಡ ಮಹಿಳೆಯರು ಇದ್ದಾರೆ ಅವರ ಬಗ್ಗೆಯೂ ಸಿಟಿ ರವಿ ಹೀಗೆ ಮಾತನಾಡುತ್ತಾರೆಯೆ ? ಎಂದು ಪ್ರಶ್ನಿಸಿದ ಅವರು, ಕೂಡಲೇ ಕೇಂದ್ರ ಸರ್ಕಾರ ಅವರ ಎಂಎಲ್ಸಿ ಸ್ಥಾನವನ್ನು ಹಿಂಪಡೆಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ. ಶೃತಿ, ಪಾರ್ವತಿ, ಕಮಲಮ್ಮ, ವಸಂತ, ಸರೋಜಾ, ನೇತ್ರ, ಮಂಜುಳಾ ಬಾಯಿ, ರಘು ದಾಶರಕೊಪ್ಪಲು, ಕಬ್ಬಲಿ ರಾಮಚಂದ್ರ, ಅಬ್ದುಲ್ ಕಯ್ಯುಮ್, ಚಂದ್ರು, ಶೇಖರ್, ವಿಜಯ್ ಕುಮಾರ್, ಮಲ್ಲಿಗೆ ವಾಳು ದೇವಪ್ಪ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page