“ನಿರಂತರವಾಗಿ ಬಿಜೆಪಿ ಸರ್ಕಾರ ಹಬ್ಬಿಸುತ್ತಿರುವ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಜನರ ಮುಂದೆ ತೆರೆದಿಡಲು ಸದಾ ಜಾಗೃತರಾಗಿರಿ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆ ಹಾಗೂ ಸಂಘಟನೆಗಳಿಗೆ ಕರೆ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಎಡೆಬಿಡದ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷ ಈಗ ಬಿಜೆಪಿ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುವಂತೆ ಸಂಘಟನೆಗಳ ಮುಖ್ಯಸ್ಥರಿಗೆ ಕರೆ ನೀಡಿದರು. 10 ವರ್ಷಗಳಿಂದ ಸರ್ಕಾರ ನೀಡುತ್ತಿರುವ ಸುಳ್ಳಿನ ಜೊತೆಗೆ 10 ವರ್ಷಗಳ ಸರ್ಕಾರದ ವೈಫಲ್ಯಗಳ ಪಟ್ಟಿ ತೆರೆದಿಡಲು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಕಿರಿಯ ಸಹೋದ್ಯೋಗಿಗಳಿಗೆ ಸಾಮಾಜಿಕ ಮಾಧ್ಯಮ ಹಾಗೂ ಜನರೊಂದಿಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು, ಸತ್ಯವನ್ನು ಹೇಳುವಾಗ ಸಭ್ಯತೆಯ ವರ್ತನೆ ಇರಬೇಕು ಎಂದು ಸಂಘಟನೆ ಮುಖ್ಯಸ್ಥರು ಕಾರ್ಯಕರ್ತರಿಗೆ ತಿಳಿ ಹೇಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.
ಮುಂಬರುವ ಭಾನುವಾರ ಮಣಿಪುರದ ಇಂಫಾಲ್ನಿಂದ ಆರಂಭವಾಗಲಿರುವ ಲೋಕಸಭೆ ಚುನಾವಣೆ ಸಿದ್ಧತೆ ಮತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ (BJNY) ಕುರಿತು ಪಕ್ಷದ ಮುಂಚೂಣಿ ಸಂಘಟನೆಗಳು, ಇಲಾಖೆಗಳು ಮತ್ತು ಕೋಶಗಳ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಖರ್ಗೆ ಮಾತನಾಡಿದರು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿಸಲು ಮತ್ತು ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಹೇಳಿದ ಖರ್ಗೆಯವರು, “ಜನರ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ, ರಾಜಕೀಯ ವಿರೋಧಿಗಳು ಹರಡುತ್ತಿರುವ ? ನಾವು ಎದುರಿಸಬೇಕಾಗಿದೆ … ನಮ್ಮ ಉದ್ದೇಶಗಳನ್ನು ತಿರುಚುವ ಅಥವಾ ಹಾಳುಗೆಡವುವ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಮಾಡಬೇಡಿ,” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ರಾಷ್ಟ್ರ ಮಟ್ಟದ ನಾಯಕರಿಂದ ಹಿಡಿದು, ಬೂತ್ ಮಟ್ಟದ ಕಾರ್ಯಕರ್ತರಿಗೂ ಅನ್ವಯ ಎಂದು ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಪಕ್ಷ ಮತ್ತು I.N.D.I.A ಮೈತ್ರಿಕೂಟದ ಬಗ್ಗೆ ಆತ್ಮವಿಶ್ವಾಸದ ಭವಿಷ್ಯವನ್ನು ಬಣ್ಣಿಸಿದ ಅವರು, ರಾಜಕೀಯ ವಾತಾವರಣ ವಿಭಿನ್ನವಾಗಿದೆ ಮತ್ತು ವಿರೋಧ ಪಕ್ಷದ ಬಣದಲ್ಲಿನ ಒಗ್ಗಟ್ಟಿನಿಂದಾಗಿ ಎನ್ಡಿಎಯಲ್ಲಿ ಅಸಮಾಧಾನವಿದೆ ಎಂದು ಹೇಳಿದರು.
“ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ತುಂಬಾ ಶ್ರಮಿಸಿದ್ದೇವೆ. ಪ್ರತಿಕೂಲ ವಾತಾವರಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಟ್ಟು 4.92 ಕೋಟಿ ಮತಗಳನ್ನು ಪಡೆದಿದೆ, ಆದರೆ ನಮಗೆ ನಿರೀಕ್ಷೆಯಂತೆ ಸ್ಥಾನಗಳು ಸಿಗಲಿಲ್ಲ…ಹಿಂತಿರುಗಿ ನೋಡಿದಾಗ ನಾವು ಈಗ ಎದುರು ನೋಡಬೇಕಾಗಿದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ದೂರವಿಲ್ಲ ಎಂದು ಖರ್ಗೆಯವರು ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಖರ್ಗೆಯವರು, “ನರೇಂದ್ರ ಮೋದಿ ಸಂಸತ್ತನ್ನು ಕೇವಲ ಚಪ್ಪಾಳೆ ಮತ್ತು ಶುಭಾಶಯಗಳ ವೇದಿಕೆಯನ್ನಾಗಿ ಮಾಡಿದ್ದಾರೆ ಮತ್ತು ಸಮಸ್ಯೆಗಳನ್ನು ಹೇಳಲು ಸಾರ್ವಜನಿಕರ ಬಳಿಗೆ ಹೋಗುವುದೊಂದೇ ಅವರಿಗೆ ಉಳಿದಿರುವ ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಜನರ ಸಂಪರ್ಕದಲ್ಲಿದೆ. ಭಾರತ್ ಜೋಡೋ ಯಾತ್ರೆಯಿಂದ ಇಲ್ಲಿಯವರೆಗೆ ನಾವೆಲ್ಲರೂ ನೇರವಾಗಿ ಕಾರ್ಯಕರ್ತರಂತೆ ಜನರ ಸಂಪರ್ಕದಲ್ಲಿ ಇದ್ದೇವೆ.. ಇದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲೂ ಮುಂದುವರೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹಾಗೆಯೇ ಪ್ರಸ್ತುತ ಭಾರತದ ಅತಿ ದೊಡ್ಡ ಸಮಸ್ಯೆಗಳಾದ ಬೆಲೆಯೇರಿಕೆ ಮತ್ತು ನಿರುದ್ಯೋಗದ ಬಗ್ಗೆ ವಿಚಾರವನ್ನು ಮರೆಮಾಚಲು ಬಿಜೆಪಿ ಪಕ್ಷ ಭಾವನಾತ್ಮಕ ಹಾಗೂ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸಲು ನಿರಂತರವಾಗಿ ಮುಂದಿದೆ. ಆದರೆ ಭಾರತ್ ಜೋಡೋ ನ್ಯಾಯ ಯಾತ್ರೆ ಇದೇ ವಿಚಾರವನ್ನು ಮುಂದಿಟ್ಟು ಜನರ ಗಮನ ಸೆಳೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇಶ ಕಳೆದ 10 ವರ್ಷಗಳಲ್ಲಿ ಸುಮಾರು 45 ವರ್ಷ ಹಿಂದಿನ ದಾರುಣ ಸ್ಥಿತಿ ತಲುಪಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಇನ್ನೂ ಹೆಚ್ಚಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಿಂದ ಆದಂತಹ ಅನ್ಯಾಯವನ್ನು ಮರೆಮಾಚಲು ಬಿಡಬಾರದು. ಜಾತಿಗಣತಿಯಂತಹ ವಿಚಾರ ಹೆಚ್ಚು ಮುನ್ನೆಲೆಗೆ ಬರಬೇಕು ಎಂದು ಖರ್ಗೆಯವರು ಪ್ರಸ್ತಾಪಿಸಿದ್ದಾರೆ.