Monday, June 17, 2024

ಸತ್ಯ | ನ್ಯಾಯ |ಧರ್ಮ

ʼರೈತರಿಗೆ ಕೊಟ್ಟ ಮಾತು ನೆನಪಿದೆಯೇ?ʼ, ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್‌ಖರ್ಗೆ ಪ್ರಶ್ನೆ

ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದು ಹೇಳಿಕೆ ನೀಡಿತ್ತು. ಆ ಬಗ್ಗೆ ಟ್ವಿಟ್‌ ಮಾಡಿರುವ ಪ್ರಿಯಾಂಕ್‌ ಖರ್ಗೆ ಅವರು ನಿವು ರೈತರಿಗೆ ಕೊಟ್ಟ ಮಾತು ನೆನಪಿದೆಯೇ? ಬೆಮ್ಮಾಯಿ ಅವರೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಬೊಮ್ಮಾಯಿ ಅವರೇ ನಿಮ್ಮ ಕಮಿಷನ್ ದಾಹಕ್ಕೆ ರೈತರ ಬದುಕು ಬೀದಿಗೆ ಬಿದ್ದಿದೆ, ಪ್ರವಾಹದಿಂದ ಬೆಳೆದ ಬೆಳೆ ನಾಶವಾಗಿದೆ, ಹವಾಮಾನದ ಮಾಹಿತಿ ಇಲ್ಲದೆ ಕಂಗಲಾಗಿದ್ದಾರೆ. ರೈತರು ಗೊಬ್ಬರ ಕೇಳಿದಕ್ಕೆ ಲಾಟಿ ಚಾರ್ಜ್ ಮಾಡಿಸಿದವರು, ರೈತ ಬಂಧು ಟಿವಿ ಚಾನೆಲ್ ಪ್ರಾರಂಭಿಸಲು ಸಾಧ್ಯವೇ? ಎಂದು ಟೀಕೆ ಮಾಡಿದ್ದಾರೆ.

ಈ ಕುರಿತು ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್‌ ಅವರು ಸಹ ಟ್ವೀಟ್‌ ಮಾಡಿ ʼನಿಮ್ಮ ಭ್ರಷ್ಟಾಚಾರದ ಕತೆಗಳು ಆ ಚಾನೆಲಿನಲ್ಲೂ ಪ್ರಸಾರವಾದರೆ ಕಷ್ಟ ಎಂದು ಭಯಪಟ್ಟಿರಾ!?ʼ ಎಂದು ಕಿಡಿಕಾರಿದ್ದಾರೆ.

ʼರೈತರಿಗೆ ಕನಿಷ್ಠ ಸಮರ್ಪಕವಾಗಿ ಗೊಬ್ಬರವನ್ನೇ ಕೊಡಲಾಗದವರು ಟಿವಿ ಚಾನಲ್ ಕೊಡುವರೇ!ʼ ಎಂದು ಟೀಕಿಸಿದ್ದಾರೆ.

ಇನ್ನಷ್ಟು: ರೈತರಿಗೆ ಗೊಬ್ಬರವನ್ನೇ ಕೊಡಲಾಗದವರು, ಟಿವಿ ಚಾನಲ್ ಕೊಡುವರೇ! : ಲಕ್ಷ್ಮೀ ಹೆಬ್ಬಾಳ್ಕರ್‌

Related Articles

ಇತ್ತೀಚಿನ ಸುದ್ದಿಗಳು