Saturday, June 15, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರಪತಿಯವರಿಗೆ ಅವಮಾನ: ತನ್ನನ್ನು ಸಮರ್ಥಿಸಿಕೊಂಡ ವಿಶ್ವೇಶ್ವರ ಭಟ್

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರು ತಮ್ಮ ಅಂಕಣದಲ್ಲಿ ಅವಮಾನಿಸಿದ್ದಾರೆ ಎಂದು ಪೀಪಲ್ ಮೀಡಿಯಾ ವಿಸ್ತೃತ ವರದಿಯೊಂದನ್ನು ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿಶ್ವೇಶ್ವರ ಭಟ್ಟರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಭಾನುವಾರ ತಮ್ಮ ಮಾತನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದ ವಿಶ್ವೇಶ್ವರ್ ಭಟ್ ಅವರು, “ಜೋರ್ಡಾನಿನ ಬಿಸಿಲಿಗೆ ನಾನೂ ಅವರಂತೆ ಆಗಿದ್ದೆ ಎಂದು ಹೇಳಿದ್ದೇನೆ ಅದರಲ್ಲಿ ಅವಮಾನವೇನು ಬಂತು” ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಮಾನಿಸಿದ್ದಾರೆನ್ನಲಾದ ಬಗ್ಗೆ ಕೀರ್ತಿಕುಮಾರ್ ಎಂಬವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕೀರ್ತಿಕುಮಾರರೇ ‘ಥೇಟು ಮುರ್ಮು ಅವತಾರ’ ಎಂದು ಬರೆದಿದ್ದರಲ್ಲಿ ನೀವು ಅದ್ಯಾವ ಅವಮಾನವನ್ನು ಕಂಡಿರೋ ನಾ ಕಾಣೆ. ಜೋರ್ಡಾನಿನ ಬಿಸಿಲ ಹೊಡೆತಕ್ಕೆ ನಾನೂ ಅವರಂತೆ ಆಗಿದ್ದೆ ಎಂದು ಹೇಳಿದ್ದೇನೆ. ಅದು ಸತ್ಯ. ಅದರಲ್ಲಿ ಅವಮಾನವೇನು ಬಂತು. ನನ್ನ ಮುಖ ಅವಮಾಸ್ಯೆ ಚಂದಿರನಂತೆ ಆಗಿತ್ತು ಅಂದ್ರೆ ಚಂದ್ರನನ್ನು ಅವಮಾನಿಸಿದಂತೆ ಅಂದಂಗಾಯ್ತು ನಿಮ್ಮ ವಾದ. ನನ್ನ ಮನಸ್ಸಿನಲ್ಲಿ ಇಲ್ಲದ ಭಾವನೆಯನ್ನು ನೀವೇಕೆ ತುಂಬುವ ಪ್ರಯತ್ನ ಮಾಡುತ್ತಿರಿ? ಇನ್ನು ನಿಮ್ಮ ಹಾಗೆ ತಿರಸಟ್ಟು ಯೋಚನೆ ಮಾಡಿದರೂ, ನಾನು ಅವರಂತೆ ಕಪ್ಪಾಗಿದ್ದೆ ಎಂದು ನನ್ನನ್ನೇ ಗೇಲಿಮಾಡಿಕೊಂಡಿದ್ದೇನೆ. ಅವರನ್ನು ಗೇಲಿ ಮಾಡಿ ಅಪಮಾನಿಸುವ ಪ್ರಶ್ನೆ ಎಲ್ಲಿಂದ ಬಂತು?. ಇರಲಿ, ಆದರೂ ನಿಮ್ಮನ್ನು ಕೇಳುತ್ತೇನೆ. ರಾಷ್ಟ್ರಭಕ್ತ ಸಂಘಟನೆಯನ್ನು ‘ಜಾಣ-ಜಾಣೆಯರ’ ಪತ್ರಿಕೆಯ ಸಂಪಾದಕರೊಬ್ಬರು ‘ಚಡ್ಡಿ’ ಎಂದು ಎರಡು ದಶಕಗಳ ಕಾಲ ಬರೆದರು. ಮೈಸೂರು ಕಡೆ ರೈತರು ಚಡ್ಡಿ ಹಾಕಿ ಹೊಲಕ್ಕೆ ಹೋಗುತ್ತಾರೆ. ಆಗೇಕೆ ನಿಮಗೆ ಆ ಸಂಪಾದಕರು ರೈತರನ್ನು ಅವಮಾನಿಸಿದರು ಎಂದು ನಿಮಗೆ ಅನಿಸಲಿಲ್ಲ. ಈ ಬಗ್ಗೆ ಒಬ್ಬೇ ಒಬ್ಬ ಬುದ್ಧಿಜೀವಿ ದನಿಯೆತ್ತಿದರಾ? ಇಲ್ಲವಲ್ಲ”.

ಸಾಮಾಜಿಕ ಜಾಲತಾಣದಲ್ಲಿ ಟಿಆರ್‌ಎಸ್ ಮುಖಂಡ ಕೆ.ಸಿ. ಚಂದ್ರಶೇಖರ್ ಅವರನ್ನು ‘ಕಪ್ಪು ತಿಕದ ಇಣಚಿ ಮೂಗಿನವ’ ಎಂದು ಹೇಳಿದಾಗ, ಎಲ್ಲರೂ ನಕ್ಕರು. ಆಗೇಕೆ ನೀವು ಸುಮ್ಮನಿದ್ದಿರಿ? ಅವೆಲ್ಲಾ ಇರಲಿ. ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಮುಖ ಬಣ್ಣವನ್ನು ಗುರಿಯಾಗಿಟ್ಟಿಕೊಂಡು ‘ಕರಿ ಇಡ್ಲಿ’ ಎಂದು ಕರೆಯುತ್ತಿರುವುದು ಬರೆಯದಿರಲು ಸಾದ್ಯವಿಲ್ಲ. ಆಗ ನೀವು ಯಾಕೆ ಸುಮ್ಮನಿದ್ದಿರಿ? ಹಾಗೆ ಬರೆದವರನ್ನು ನೀವು ಪ್ರಶ್ನೆ ಮಾಡಿದ್ದೀರಾ? ಬೇರೆಯವರ ಮೇಲೆ ಉಚ್ಚೆ ಹಾರಿಸುವ ಮೊದಲು ನಮ್ಮ ಕಾಲ ಮೇಲೆ ಬೀಳದಂತೆ ನೋಡಿಕೊಳ್ಳಬೇಕಲ್ಲವೇ?!..ಹಾಂ!” ಎಂದು ಸಮರ್ಥಿಸಿಕೊಂಡಿದ್ದಾರೆ.

ಜೋರ್ಡಾನ್ ದೇಶದ ಭೌಗೋಳಿಕ ವ್ಯವಸ್ಥೆ ಮತ್ತು ಅಲ್ಲಿನ ಹವಾಮಾನವನ್ನು ಪರಿಚಯ ಮಾಡಿಕೊಡುವ ಭರದಲ್ಲಿ ಅ. 06ರಂದು ಪ್ರಕಟವಾದ ವಿಶ್ವೇಶ್ವರ ಭಟ್ ಅಂಕಣದಲ್ಲಿ, ಅಪ್ಪಟ ಬೆಂಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ’ ಎಂದು ಹೇಳಿ, ಶ್ರೀಮತಿ ದ್ರೌಪದಿ ಮುರ್ಮು ಅವರ ಮೈಬಣ್ಣವನ್ನು ಪರೋಕ್ಷವಾಗಿ ಗೇಲಿ ಮಾಡಿದ್ದಾರೆ. ಇದು ಸ್ಪಷ್ಟವಾಗಿ ವರ್ಣಭೇದ ನೀತಿಯ ಕೆಳಗೆ ಬರುತ್ತದೆ ಎಂದು ಪೀಪಲ್ ಮೀಡಿಯಾ ವರದಿ ಮಾಡಿತ್ತು.

ವಕ್ರತುಂಡೋಕ್ತಿ ಎಂಬ ತಲೆಬರಹದ ಅಡಿಯಲ್ಲಿ, ಮಹಿಳೆಯರ ಕುರಿತು, ಜಾತಿನಿಂಧನೆ, ಬಣ್ಣದ ಹಿನ್ನೆಲೆಯಲ್ಲಿ ಕುಹಕ, ಸೈದ್ಧಾಂತಿಕ ವಿರೋಧಿಗಳ ಅವಹೇಳನದಂತಹ ಹಲವಷ್ಟು ಕೀಳು ಮಟ್ಟದ ಟ್ರೋಲ್ ಗಳನ್ನು ಮಾಡಿ ಸಾಮಾಜಿಕವಾಗಿ ಟೀಕೆಗೆ ಗುರಿಯಾಗಿದ್ದರು.

ನೆಟ್ಟಿಗರಿಂದ ಪತ್ರಕರ್ತ ವಿಶ್ವೇಶ್ವರ ಭಟ್ ಗೆ ಫುಲ್ ಕ್ಲಾಸ್

ಲೋಕೇಶ್ ಪೂಜಾರಿ ಎಂಬುವವರು, ವಿಶ್ವೇಶ್ವರ ಭಟ್ಟ, ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಸುಟ್ಟು ಕರಕಲಾದ ಕಾಗೆಯ ಬಣ್ಣದವರು ಎಂದು ನೇರವಾಗಿ ವ್ಯಕ್ತಿಗತ ನಿಂದನೆ ಮಾಡಿ, ನಂತರ ಲಂಕೇಶರು ಆರ್ ಎಸ್ ಎಸ್ ನವರನ್ನು ಚಡ್ಡಿಗಳು ಎಂದು ಕರೆಯುತ್ತಿದ್ದರು ಅದು ಚಡ್ಡಿ ಹಾಕುವ ರೈತರಿಗೆ ಮಾಡುವ ಅವಮಾನ ಎಂದು ಭೋಂಗು ಬಿಟ್ಟಿದ್ದಾನೆ.

ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಮಾಡುವ ನಿಂದನೆಗೆ ಅದು ಒಂದು ಪರ್ಸೆಂಟ್ ಕೂಡ ಸಮರ್ಥನೆ ಅಲ್ಲ. ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ಯಾಕೆ ತನಿಖೆ ಮಾಡುವುದಿಲ್ಲ? ಎಂದು ಪೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.

https://m.facebook.com/story.php?story_fbid=pfbid0d3kJgasr8PckiH3icx2bC25ksfCGXFbskNJmJzcdW3xuiWfKEJJ2JhNh1SKBBzRwl&id=100000447327107

ರಾಷ್ಟ್ರಪತಿಯವರ ಮೈಬಣ್ಣವನ್ನೇ ಕೀಳಾಗಿ ಅವಮಾನಿಸಿದ ವಿಶ್ವೇಶ್ವರ ಭಟ್ಟನಿಗೆ ಧಿಕ್ಕಾರವಿರಲಿ.. ಎಂದು ಗಿರೀಧರ್ ಕಾರ್ಕಾಳ ಅವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ವಿರೋಧ ವ್ಯಕ್ತೊಡಿಸಿದ್ದಾರೆ.

https://m.facebook.com/story.php?story_fbid=pfbid05aJP6zUxRsePQG45CvM4VTFyw8Vat6v4FNybKwnd2WXM6NFBJwfMq7CwnMdXKMNrl&id=1210745284

ವಿಶ್ವ ವಾಣಿ ಪತ್ರಿಕೆಯ ವಿಶ್ವೇಶ್ವರ ಭಟ್ಟ ಅಲ್ಲದೇ ಪ್ರೊಗ್ರೆಸ್ಸಿವ್ ಪತ್ರಿಕೆಯ ಇನ್ಯಾವುದೇ ಪತ್ರಕರ್ತ ಈ ರೀತಿ ಬರೆದಿದ್ದರೆ ಇಷ್ಟೊತ್ತಿಗೆ ಬಂಧನವಾಗುತ್ತಿತ್ತು ಎಂದು veeke valpadi ಎಂಬುವವರು ತಮ್ಮ ಪೇಸ್ ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://m.facebook.com/story.php?story_fbid=pfbid029FNLvQiC63QUF8LZQ9hTb9NH9cqgEPFbxTg8omC2XMpVmZHcPr5HrxWsNF2XLGBDl&id=100004153001113

ಇದನ್ನೂ ನೋಡಿ: ರಶ್ಮಿಕಾ ಮಂದಣ್ಣ ಅವರಂತೆಯೇ ಇರುವ ಮತ್ತೊಬ್ಬ ನಟಿ
ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ಈ ನಟಿ ಯಾರು?
ತಿಳಿಯಲು ಈ ಲಿಂಕ್ ಒತ್ತಿ

ಪೀಪಲ್ ಟಿವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ಶೇರ್ ಮಾಡಿ

https://www.facebook.com/peepaltvkannada/videos/663302108474134

Related Articles

ಇತ್ತೀಚಿನ ಸುದ್ದಿಗಳು