Saturday, June 21, 2025

ಸತ್ಯ | ನ್ಯಾಯ |ಧರ್ಮ

ಧರ್ಮಾಧಾರಿತ ರಾಜಕೀಯ ದಾಳಿಗಳು ಹಾಗೂ ಸಂಘಟಿತ ಕೋಮು ಹಿಂಸಾಚಾರಗಳು ಕರಾವಳಿಯಲ್ಲಿ ಹೆಚ್ಚುತ್ತಿವೆ – ಮುನೀರ್ ಕಾಟಿಪಳ್ಳ

ಕರಾವಳಿಯಲ್ಲಿ ಕೋಮು ಹಿಂಸಾಚಾರ – ಹಾಸನದಲ್ಲಿ ಚಿಂತನಾ ಸಭೆ ಹಾಸನ,

ಹಾಸನ : ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಇತ್ತೀಚೆಗೆ ಏರಿಕೆಯಾದ ಕೋಮು ಹಿಂಸಾಚಾರಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಸೌಹಾರ್ದ ಕರ್ನಾಟಕ ಸಂಸ್ಥೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಗರದ ಆರ್.ಸಿ. ರಸ್ತೆಯ ಮಿಷನ್ ಆಸ್ಪತ್ರೆ ಎದುರಿನ ಶ್ರಮ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.ಸಭೆಯಲ್ಲಿ ಜನಪರ ಹೋರಾಟಗಾರ ಹಾಗೂ ಸಿಪಿಐ(ಎಂ) ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ,
“ಧರ್ಮಾಧಾರಿತ ರಾಜಕೀಯ ದಾಳಿಗಳು ಹಾಗೂ ಸಂಘಟಿತ ಕೋಮು ಹಿಂಸಾಚಾರಗಳು ಕರಾವಳಿಯಲ್ಲಿ ಭಯದ ವಾತಾವರಣವನ್ನು ರೂಪಿಸುತ್ತಿವೆ. ಇದು ದೇಶದ ಜಾತ್ಯತೀತ ಸೌಭ್ರಾತೃತ್ವದ ಮೌಲ್ಯಗಳಿಗೆ ಕಳಂಕ ತರುವ ಅಪಾಯವಾಗಿದೆ.”ಕರಾವಳಿಯಲ್ಲಿ ನಡೆಯುತ್ತಿರುವ ಅಶಾಂತಿಯ ವಾತಾವರಣವು ಅಲ್ಲಿಗೆ ಸೀಮಿತವಾದ ಸಮಸ್ಯೆಯಲ್ಲ; ಇದೊಂದು ದೇಶದ ಸಮಸ್ಯೆಯಾಗಿದೆ. ಇಲ್ಲಿನ ಶಾಂತಿಯ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು ಹಾಗೂ ಇಂತಹ ವಾತಾವರಣ ಎಲ್ಲಿಯೂ ಹಾಳಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಕರಾವಳಿಯಲ್ಲಿ ಕೆಲವು ವ್ಯಕ್ತಿಗಳು ಧರ್ಮದ ದ್ವೇಷಕ್ಕೆ ಮತ್ತು ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತಿದ್ದಾರೆ. ಬಹಳಷ್ಟು ಜನ ಶಾಂತಿಯನ್ನು ಬಯಸುತ್ತಾರೆ, ಆದರೆ ಕಾರ್ಯರೂಪಕ್ಕೆ ತರುವಲ್ಲಿ ಕೋಮುವಾದಿಗಳು ಮುಂದಿರುವುದರಿಂದ ಶಾಂತಿಯ ಸಂದೇಶವನ್ನು ಸಾರುವ ವ್ಯಕ್ತಿಗಳ ಮಾತು ಕಾರ್ಯಕರ್ತವಾಗುತ್ತಿಲ್ಲ. ಅದಕ್ಕಾಗಿ ನಾವು ಬಹಳಷ್ಟು ಕೆಲಸ ಮಾಡುತ್ತಿದ್ದೇವೆ.
ಕರಾವಳಿಯಲ್ಲಿ ಶಾಂತಿ ನೆಲೆಸಲಿ, ನಾವು ಸಹ ನೆಮ್ಮದಿಯಿಂದ ಬದುಕುವ ವಾತಾವರಣ ಮೂಡಲಿ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಜನಪರ ಹೋರಾಟಗಾರ ಧರ್ಮೇಶ್ ಮಾತನಾಡಿ,
“ಕರಾವಳಿಯಲ್ಲಿ ನೆಮ್ಮದಿ ಮರುಸ್ಥಾಪನೆಗೆ ಪ್ರಯತ್ನಿಸುವ ಜವಾಬ್ದಾರಿ ಅಲ್ಲಿನವರಷ್ಟೇ ಅಲ್ಲ; ಅದು ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಪ್ರತಿನಿಧಿಗಳು ಕೈಜೋಡಿಸಿ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು. ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, “ಸರ್ವಧರ್ಮೀಯರು ರಚನಾತ್ಮಕ ಕೆಲಸಗಳಲ್ಲಿ ತೊಡಗಬೇಕು. ಪರಿಸರ ಸಂರಕ್ಷಣೆಯಂತಹ ಪ್ರಗತಿಪರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಕರಾವಳಿಯಲ್ಲಿ ಕೈ ಕೈ ಜೋಡಿಸಿ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕು ಎಂದರು”ಯುವಕರು ಕೋಮುವಾದಕ್ಕೆ ಬಲಿಯಾಗಬಾರದು. ಧರ್ಮವನ್ನು ಬೇರ್ಪಡಿಸಿ, ಧರ್ಮದ ಹೆಸರಿನಲ್ಲಿ ಯಾರು ಸತ್ತರೂ ಅದು ನಮ್ಮ ಮಕ್ಕಳ ಸಾವೇ ಆಗಿದೆ. ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು. ಸಭೆಯಲ್ಲಿ ಧರ್ಮೇಶ್, ಮುನೀರ್ ಕಾಟಿಪಳ್ಳ, ರೂಪ ಹಾಸನ್, ಆರ್.ಪಿ ವೆಂಕಟೇಶ್ ಮೂರ್ತಿ, ನವೀನ್ ಕುಮಾರ್, ನಾಗರಾಜ್ ಹೆತ್ತೂರು, ಪೃಥ್ವಿ ಎಂ.ಜಿ, ಮಂಜುನಾಥ್ ತೌಫೀಕ್ ಅಹಮದ್, ಪೃಥ್ವಿ, ಸಮೀರ್, ಮಲ್ನಾಡ್ ಮೆಹಬೂಬ್, ಮುಬಶೀರ್ ಅಹಮದ್, ಮಹೇಶ್, ಅರವಿಂದ್, ರಮೇಶ್, ಪ್ರೇಮದೇಶ್ ಹಾಗೂ ಹಲವರು ಭಾಗವಹಿಸಿದ್ದರು..

Related Articles

ಇತ್ತೀಚಿನ ಸುದ್ದಿಗಳು

You cannot copy content of this page