Home ಬೆಂಗಳೂರು ಕ್ರಿಕೆಟ್ ತಂಡದಲ್ಲಿ ಮೀಸಲಾತಿ: ಚೇತನ್ ಹೇಳಿಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಕ್ರಿಕೆಟ್ ತಂಡದಲ್ಲಿ ಮೀಸಲಾತಿ: ಚೇತನ್ ಹೇಳಿಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

0

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಇರಬೇಕು ಎಂದು ಕನ್ನಡ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರದಲ್ಲಿ ಮೀಸಲಾತಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಚೇತನ್, ʼಭಾರತೀಯ ಕ್ರಿಕೆಟ್ನಲ್ಲಿ, ಶೇಕಡಾ 70 ರಷ್ಟು ಆಟಗಾರರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಹೀಗಾಗಿ ಕ್ರಿಕೆಟ್ನಲ್ಲಿಯೂ ಮೀಸಲಾತಿಯನ್ನು ಜಾರಿಗೆ ತಂದರೆ, ತಂಡದ ಪ್ರದರ್ಶನವು ಉತ್ತಮವಾಗಿರುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದರು.

ʼಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಹೆಚ್ಚಿನ ಆಟಗಾರರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಬೇಕಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ದಿಷ್ಟ ಸಂಖ್ಯೆಯ ಬಿಳಿಯರಲ್ಲದ ಆಟಗಾರರನ್ನು ತಮ್ಮ ರಾಷ್ಟ್ರೀಯ ತಂಡದಲ್ಲಿ ಇರುವುದನ್ನು ಕಡ್ಡಾಯಗೊಳಿಸಿದೆ. ಭಾರತದ ಕ್ರಿಕೆಟ್ ಮಂಡಳಿಯು ಎಷ್ಟು ಹಣ ಒಳಗೊಂಡಿದೆ ಮತ್ತು ಅದರ ಮೇಲೆ ಮಾಧ್ಯಮಗಳ ಪ್ರಭಾವವು ಎಲ್ಲರಿಗೂ ತಿಳಿದಿದೆ. ಭಾರತೀಯ ಕ್ರಿಕೆಟ್ ತಂಡವು ಉತ್ತಮ ಪ್ರದರ್ಶನ ನೀಡಬೇಕಾದರೆ, ಮೀಸಲಾತಿಯೂ ಅಗತ್ಯವಾಗಿದೆ. ಉತ್ತಮ ಸಾಧನೆಗಾಗಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಯನ್ನು ತರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು, ಕೆಲವರು ಜಾತಿಯನ್ನು ಕೇವಲ ಪ್ರದರ್ಶನದ ಆಧಾರದ ಮೇಲೆ ಕ್ರೀಡೆಗೆ ತರಲು ಏಕೆ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಫೇಸ್ಬುಕ್ ಬಳಕೆದಾರ ಹಮೀದ್ ಬೋರ್ಕಲಾ, ʼಇದು ಅರ್ಥಹೀನ ಹೇಳಿಕೆ, ಆಯ್ಕೆಗಳು ಪ್ರತಿಭೆಯ ಆಧಾರದ ಮೇಲೆ ಇರಬೇಕು. ಇದರಲ್ಲಿ ಮೀಸಲಾತಿಯು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಚೇತನ್ ಕುಮಾರ್ ಅವರನ್ನು ಬೆಂಬಲಿಸಿದ ಫೇಸ್ಬುಕ್ ಬಳಕೆದಾರ ಸೂರಜ್ ಸಮಲ್ ಎಂಬುವರು, ʼಚೇತನ್ ಅವರ ಹೇಳಿಕೆಯು, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಈಗಾಗಲೇ ಕ್ರಿಕೆಟ್ನಲ್ಲಿ ವೈವಿಧ್ಯತೆಯನ್ನು ತರಲು ಮತ್ತು ಏಕಸ್ವಾಮ್ಯವನ್ನು ಕಡಿಮೆ ಮಾಡಲು ಈಗಾಗಲೇ ಪ್ರಯತ್ನಿಸಲಾಗುತ್ತಿದೆ.  ದೀನದಲಿತ ಹಿನ್ನೆಲೆಯಿಂದ ಬರುವ ಜನರನ್ನು ಅಪ್ಪಿಕೊಳ್ಳುವಾಗ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಉತ್ತಮ ಮಾನವ ಜೀವಿಯಾಗಿರಲು ಇದು ನಮಗೆ ಕಲಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಚೇತನ್ ಕುಮಾರ್ ಇತ್ತೀಚೆಗೆ ಕನ್ನಡದ ಜನಪ್ರಿಯ ಚಲನಚಿತ್ರ ಕಾಂತಾರ ಬಗ್ಗೆ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದರು. ಕರಾವಳಿ ಕರ್ನಾಟಕದ ಜನರು ಆಚರಿಸುವ ಮತ್ತು ಚಿತ್ರದಲ್ಲಿ ಚಿತ್ರಿಸಲಾದ ಭೂತ ಕೋಲದ ಆಚರಣೆಯು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಅವರು ಹೇಳಿದ್ದರು. ಅಮೆರಿಕದಲ್ಲಿ ಹುಟ್ಟಿ ಬೆಳೆದ ಚೇತನ್ ಕುಮಾರ್, ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ನಡೆದ ಚಳವಳಿಗಳಲ್ಲಿ ಚಿರಪರಿಚಿತ ಮುಖವಾಗಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ, ಕೊಡಗಿನಿಂದ ಹೊರಹಾಕಲ್ಪಟ್ಟ ಬುಡಕಟ್ಟು ಜನರಿಗೆ ಮನೆಗಳಿಗಾಗಿ ಆಗ್ರಹಿಸಿದ್ದರು. ಇತ್ತೀಚೆಗೆ, ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನಕ್ಕಾಗಿ ನಡೆದ ಚಳವಳಿಗಳೊಂದಿಗೆ ಅವರು ಗುರುತಿಸಿಕೊಂಡಿದ್ದರು.

You cannot copy content of this page

Exit mobile version