Thursday, June 20, 2024

ಸತ್ಯ | ನ್ಯಾಯ |ಧರ್ಮ

ಅನ್ನಭಾಗ್ಯ: ಅಕ್ಕಿ ಬೇಕೋ, ದುಡ್ಡು ಬೇಕೋ? – ಸರ್ವೇ ನಡೆಸಲಿದೆ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಹಾಗೂ ಸಿದ್ಧರಾಮಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯಡಿ ಈಗ ಐದು ಕೇಜಿ ಅಕ್ಕಿ ಹಾಗೂ ಐದು ಕೇಜಿ ಅಕ್ಕಿಯ ಹಣವನ್ನು ನೇರ ಫಲಾನುವಿಗಳ ಕಾರ್ಡಿಗೆ ವರ್ಗಾಯಿಸುತ್ತಿರುವುದು ಈಗಾಗಲೇ ಗೊತ್ತಿರುವ ವಿಷಯ.

ಕೇಂದ್ರ ಸರ್ಕಾರದ ಕಿರಿಕಿರಿಯ ಕಾರಣ 10 ಕೇಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸರ್ಕಾರವು 5 ಕೇಜಿ ಅಕ್ಕಿ ಕೊಟ್ಟು ಇನ್ನೈದು ಕೇಜಿ ಅಕ್ಕಿಯ ಹಣವನ್ನು ನೇರವಾಗಿ ಬ್ಯಾಂಕ್‌ ಹಾಕಲು ನಿರ್ಧಾರ ಮಾಡಿತ್ತು.

ಪ್ರಸ್ತುತ ಸರ್ಕಾರವು ಈ ಯೋಜನೆಯಡಿ ಹಣ ನೀಡುವುದನ್ನು ಮುಂದುವರೆಸಬೇಕೋ ಅಥವಾ ಪೂರ್ತಿಯಾಗಿ ಅಕ್ಕಿಯನ್ನೇ ಕೊಡಬೇಕೋ ಎನ್ನುವುದರ ಕುರಿತು ಜಿಲ್ಲಾ ಮಟ್ಟದಲ್ಲಿ ಸರ್ವೇ ನಡೆಸುವಂತೆ ಸರ್ಕಾರ ಸೂಚಿಸಿದೆ.

ಈ ಸಮೀಕ್ಷೆಯ ಫಲಿತಾಂಶವನ್ನು ನೋಡಿ ಹೇಗೆ ಮುಂದುವರೆಯಬೇಕನ್ನುವುದನ್ನು ಸರ್ಕಾರ ನಿರ್ಧರಿಸಲಿದೆ ಎನ್ನಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ 95% ಡಿಬಿಟಿ ಯೋಜನೆಯ ಹಣ ತಲುಪಿಸಲಾಗಿದ್ದು, ಅನ್ನಭಾಗ್ಯದ ಅಕ್ಕಿ ನೀಡಲು ಹಲವು ರಾಜ್ಯಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಅಕ್ಕಿ ಸಿಗದಿದ್ದಲ್ಲಿ ಡಿಬಿಟಿ ಮುಂದುವರಿಸಲು ಸರ್ಕಾರ ಚಿಂತನೆ ನಡೆಸಿದೆ.

ಸದ್ಯ ರಾಜ್ಯದಲ್ಲಿ 1.27 ಕೋಟಿಯಷ್ಟು BPL ಕುಟುಂಬಗಳಿವೆ. ಕುಟುಂಬಗಳಿಗೆ ಡಿಬಿಟಿ ಮಾಡಲು 776 ಕೋಟಿ ರೂ. ಹಣ ತಗುಲಿದೆ. ಇದಕ್ಕೆ ಸುಮಾರು 2 ಲಕ್ಷದ 40 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಅಕ್ಕಿ ಖರೀದಿಗೆ ಅಂದಾಜು 900 ಕೋಟಿ ರೂ. ಹಣ ಖರ್ಚಾಗುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು