Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸಹಜಸ್ಥಿತಿಗೆ ಮರಳಿದ ಶಿವಮೊಗ್ಗ

ಸಹಜಸ್ಥಿತಿಗೆ ಮರಳಿದ ಶಿವಮೊಗ್ಗ

0

ಶಿವಮೊಗ್ಗ: ಇತ್ತೀಚಿಗೆ ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಿದ ಕಾರಣ, ನಗರದಲ್ಲಿ ಹಿಂಸಾಚಾರಕ ಕೃತ್ಯಗಳು ನಡೆದಿದ್ದರಿಂದ ಆ.18 ರವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಆದರೆ ಇಂದು ಶಿವಮೊಗ್ಗ ಸಹಜ ಸ್ಥಿತಿಗೆ ಮರಳಿದ್ದು, ಎಂದಿನಂತೆ ಜನರು ಓಡಾಟ ನಡೆಸುತ್ತಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್  ತಿಳಿಸಿದ್ದಾರೆ.

ಹಿಂಸಾಚಾರದ ನಂತರ ಪರಿಸ್ಥಿತಿ ಕುರಿತು ಮಾತನಾಡಿರುವ ಶಾಸಕ ಕೆ.ಎಸ್ ಈಶ್ವರಪ್ಪ, ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಹೇಳಿದರು.

ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ನಿನ್ನೆಯವರೆಗೆ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಆದರೆ ಸರ್ಕಾರ ಮತ್ತು ಪೊಲೀಸರ ಸಹಾಯದಿಂದ ನಗರ ಸಹಜವಾತವರಣಕ್ಕೆ ಮರಳಿದೆ. ಪರಿಸ್ಥಿತಿ ಹತೋಟಿಗೆ ಬಂದಿದ ಕಾರಣ ಶಾಲಾ-ಕಾಲೇಜುಗಳು ಮತ್ತೆ ತೆರೆಯಲಾಗಿದೆ ಎಂದರು.  

You cannot copy content of this page

Exit mobile version