Monday, April 28, 2025

ಸತ್ಯ | ನ್ಯಾಯ |ಧರ್ಮ

ಸಕಲೇಶಪುರ: ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಕಳ್ಳರು

ಸಕಲೇಶಪುರ : ಬ್ಯಾಂಕ್  ಎದುರು ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ರೂ. ನಗದು‌ ಕಳವಾಗಿರುವ ಘಟನೆ ಪಟ್ಟಣದ ಬಿ. ಎಂ ರಸ್ತೆಯಲ್ಲಿ ನಡೆದಿದೆ.ಕುಡುಗರಹಳ್ಳಿಯ ಯೋಗೇಶ್ ಹಣ ಕಳೆದುಕೊಂಡ ವ್ಯಕ್ತಿ. ತುರ್ತು ಕಾರ್ಯದ ನಿಮಿತ್ತ ಮನೆಯಲ್ಲಿದ್ದ ಚಿನ್ನಾಭರಣವನ್ನು ನಗರದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಗಿರವಿ ಇಟ್ಟು 13 ಲಕ್ಷ ರೂ. ಸಾಲ ಪಡೆದಿದ್ದ ಯೋಗೇಶ್ ಅವರು ಅಗತ್ಯವಿದ್ದ ಹೆಚ್ಚುವರಿ 2.5 ಲಕ್ಷ  ರೂ. ಹಣವನ್ನು ಡ್ರಾ ಮಾಡಲು ಕೆನರಾ ಬ್ಯಾಂಕ್ ಶಾಖೆಗೆ ಆಗಮಿಸಿದ್ದಾರೆ.

 ಕೆನರಾ ಬ್ಯಾಂಕಿನೊಳಗೆ ಹೋಗುವ ಮುನ್ನ ತಮ್ಮ ಸ್ಕೂಟರ್ ನ ಸೇಫ್ಟಿ ಬಾಕ್ಸ್ ನಲ್ಲಿ ಬ್ಯಾಂಕ್ ಆಫ್ ಬರೋಡದಿಂದ ತಂದಿದ್ದ 13 ಲಕ್ಷ ರೂಮ ಹಣವನ್ನು ಇಟ್ಟು ಕೆನರಾ ಬ್ಯಾಂಕಿನೊಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಬೈಕಿನ ಬಾಕ್ಸ್ ಮುರಿದು ಹಣ ಕದ್ದು ಪರಾರಿ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page